ಹಾಸನ: ರಕ್ಷಣೆ ನೀಡಬೇಕಾದ ಆರಕ್ಷಕನೇ ವರದಕ್ಷಿಣೆಗಾಗಿ ಪತ್ನಿಯೊಂದಿಗೆ ಪೈಶಾಚಿಕವಾಗಿ ವರ್ತಿಸಿ, ವಿಷ ಕುಡಿಸಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಅರಕಲಗೂಡು ತಾಲೂಕಿನ ಮಸ್ಸತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಪೊಲೀಸ್ ಪೇದೆ ಅರುಣ್ ಗುಪ್ತಾಂಗಕ್ಕೆ ಮೆಣಸಿನ ಪುಡಿ ಹಾಕಿದ ಪರಿಣಾಮ ಪತ್ನಿಯನ್ನು ಈಗ ಐಸಿಯುನಲ್ಲಿ ದಾಖಲಿಸಲಾಗಿದೆ.
ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸ್ ಠಾಣೆಯ ಪೇದೆಯಾಗಿರುವ ಅರುಣ್ ಜೊತೆ ಕಳೆದ ಎಂಟು ತಿಂಗಳ ಹಿಂದೆ ಅಷ್ಟೇ ಮಗಳ ಜೊತೆ ಮದುವೆ ನಡೆದಿತ್ತು. ಈಗ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಈ ರೀತಿ ಪೈಶಾಚಿಕವಾಗಿ ವರ್ತಿಸಿದ್ದಾನೆಂದು ಪಾಲಕರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ನೊಂದ ಮಹಿಳೆ, ನನ್ನ ಪತಿ ತಾಯಿಯ ಮಾತನ್ನು ಕೇಳಿ ಹಿಂಸೆ ನೀಡುತ್ತಿದ್ದ. ನೀನು ತಂದ ವರದಕ್ಷಿಣೆ ಕಡಿಮೆಯಾಯಿತು ಎಂದು ಹೊಡೆಯುತ್ತಿದ್ದ. ನಿನ್ನ ಕಾಲುಗುಣ ಸರಿಯಿಲ್ಲ, ನಿನ್ನ ಸೊಂಟ ಮುರಿದು ಮೂಲೆಗೆ ಕೂಡಿಸುತ್ತೇನೆ ಎಂದು ಹೇಳಿ ತನಗೆ ವಿಷ ಕುಡಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ನೊಂದ ಮಹಿಳೆಯ ಪಾಲಕರು ಈ ಹಿಂದೆ ಹಲವಾರು ಬಾರಿ ನಮ್ಮ ಮಗಳಿಗೆ ಅವರ ಅತ್ತೆ ಹಿಂಸೆ ನೀಡಿದ್ದರು. ಆಗ ನಾವೇ ಹೋಗಿ ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದೆವು. ನಿಮ್ಮ ತಾಯಿಯ ಜೊತೆ ಹೊಂದಾಣಿಕೆ ಆಗದಿದ್ದರೆ ಬೇರೆ ಹೋಗು ಎಂದೂ ಅರುಣ್ ಗೆ ಹೇಳಿದ್ದೆವು. ಅದನ್ನು ಕೇಳದೇ ಈ ರೀತಿ ಅರುಣ್ ತಮ್ಮ ಮಗಳಿಗೆ ಹಿಂಸೆ ನೀಡಿದ್ದಾನೆ ಎಂದರು.
ಇನ್ನು ಪೇದೆ ರಮೇಶ್ ವಿರುದ್ಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೇದೆ ರಮೇಶ್ ಪರಾರಿಯಾಗಿದ್ದು, ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ.
https://www.youtube.com/watch?v=iQSZ5G8aTRY