ಬೆಂಗಳೂರು: ಶಿವಾಜಿನಗರದ ಪೊಲೀಸ್ ಕ್ವಾಟರ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪೇದೆಯೊಬ್ಬರು ಮಗಳು ಬಲಿಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹರ್ಷಾಲಿ(4) ಮೃತ ದುರ್ದೈವಿ. ಹರ್ಷಾಲಿ ಕಬ್ಬನ್ ಪಾರ್ಕ್ ಸಂಚಾರಿ ಠಾಣೆ ಪೇದೆ ಲೋಕೇಶಪ್ಪ ಮಗಳಾಗಿದ್ದು, ಇದೇ ತಿಂಗಳು 5ನೇ ತಾರೀಖಿನಂದು ಆಟವಾಡಲು ಪಾರ್ಕಿಗೆ ಹೋಗಿದ್ದಳು. ಈ ವೇಳೆ ಶಿವಾಜಿನಗರ ಕ್ವಾಟರ್ಸ್ ನಲ್ಲಿ ಒಣಗಿದ್ದ ಮರಕ್ಕೆ ಬೆಂಕಿ ಹಾಕಲಾಗಿತ್ತಿ. ಒಣಗಿದ್ದ ಮರಕ್ಕೆ ಬೆಂಕಿ ಹಾಕಿದ್ದನ್ನ ಗಮನಿಸದೆ ಅಲ್ಲಿಯೇ ಆಟವಾಡುತ್ತಿದ್ದ ಹರ್ಷಾಲಿ ಬೆಂಕಿಗೆ ಬಿದ್ದಿದ್ದಳು.
ಬೆಂಕಿಗೆ ಬಿದ್ದ ಹರ್ಷಾಲಿಯನ್ನು ಸಾರ್ವಜನಿಕರು ಕಾಪಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಒಂದು ವಾರ ಚಿಕಿತ್ಸೆ ನೀಡಿದರೂ ಹರ್ಷಾಲಿ ಬದುಕುಳಿಯಲಿಲ್ಲ. ಇಷ್ಟಾದರೂ ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕ್ವಾಟರ್ಸ್ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.