ತುಮಕೂರು: ಲಂಚ ನೀಡಲಿಲ್ಲವೆಂದು ಮಟ್ಕಾ ದಂಧೆ ಆರೋಪಿಗೆ ಮೇಲೆ ಆಂಧ್ರ ಪ್ರದೇಶದ ಕಂಬದೂರು ಪೊಲೀಸರು ಮನಬಂದಂತೆ ಥಳಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಪಾವಗಡ ತಾಲೂಕಿನ ಡೊಡ್ಡಹಳ್ಳಿ ಗ್ರಾಮದ ನಿವಾಸಿ ವೀರೇಶ್ ಹಲ್ಲೆಗೆ ಒಳಗಾದ ಆರೋಪಿ. ಮಟ್ಕಾ ಆರೋಪದ ಮೇಲೆ ವೀರೇಶನನ್ನು ಆತನ ಮನೆಯಲ್ಲಿ ಮೇ 29 (ಮಂಗಳವಾರ) ಮಧ್ಯರಾತ್ರಿ ಆಂಧ್ರ ಪ್ರದೇಶದ ಕಂಬದೂರು ಪೆÇಲೀಸರು ಬಂದಿಸಿದ್ದರು. ಕೇಸ್ ವಾಪಾಸ್ ಪಡೆಯುತ್ತೇವೆ 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರಂತೆ. ಇದಕ್ಕೆ ವೀರೇಶ್ ಒಪ್ಪದಿದ್ದಾಗ ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿರಿಸಿ, ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ ಎಂದು ವೀರೇಶ್ ಹೇಳ್ತಾರೆ.
ಗುರುವಾರ ಆಂಧ್ರ ಪ್ರದೇಶ ಪೊಲೀಸರಿಗೆ 2.5 ಲಕ್ಷ ರೂ. ನೀಡಿದ್ದರಿಂದ ಅಂದು ರಾತ್ರಿ ವೀರೇಶನನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವೀರೇಶನ ಸೊಂಟ, ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವೀರೇಶನ ಸಂಬಂಧಿಕರು ಆಂಧ್ರಪ್ರದೇಶ ಪೊಲೀಸರ ವರ್ತನೆ ಕಂಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಕೊಡಲು ಮುಂದಾಗಿದ್ದಾರೆ.