ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬರುತ್ತಿದ್ದ ಖದೀಮರ ಬಂಧನ

Public TV
1 Min Read
TMK ARREST

ತುಮಕೂರು: ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಒಂಟಿ ಮಹಿಳೆಯರ ಮನೆ ದೋಚುತ್ತಿದ್ದ ಕಳ್ಳರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ಗಣೇಶ್, ರಾಮಚಂದ್ರ ಹಾಗೂ ಫರಿದುಲ್ ಇಂತಿಯಾಸ್ ಬಂಧಿತ ಆರೋಪಿಗಳು. ಈ ಖದೀಮರು ಜೂನ್ 16 ರಂದು ನಗರದ ಸಿ.ಎಸ್.ಐ ಲೇಔಟನ್ ಮನೋರಮಾ ಒಂಟಿ ಮಹಿಳೆಯ ಮನೆಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಹೋಗಿದ್ದಾರೆ. ಬಳಿಕ ಚಿನ್ನಾಭರಣ ಸೇರಿದಂತೆ ಸುಮಾರು 10 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.

ಬಂಧಿತರು ಶಿವಮೊಗ್ಗ ಹಾಗೂ ತಮಿಳುನಾಡಿನವರಾಗಿದ್ದು, ಮೈಸೂರು ಹಾಗೂ ಬೆಂಗಳೂರಿನಲ್ಲೂ ತಲಾ ಎರಡು ಮನೆಯಲ್ಲಿ ಇದೇ ಕಳ್ಳರು ದೋಚಿದ್ದಾರೆ. ಸದ್ಯಕ್ಕೆ ತುಮಕೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಕದ್ದಿದ್ದ ಹಣ ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.  ಇದನ್ನು ಓದಿ: ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದು ವೃದ್ಧೆಗೆ ವಂಚಿಸಿ 20 ಲಕ್ಷ ರೂ. ಚಿನ್ನಾಭರಣ ದೋಚಿದ್ರು!

tmk 2

Share This Article
Leave a Comment

Leave a Reply

Your email address will not be published. Required fields are marked *