ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ- ಎಲ್ಲೆಲ್ಲಿ ಕಾರ್ಯಕ್ರಮ? ಪರ್ಯಾಯ ಮಾರ್ಗಗಳು ಯಾವುದು?

Public TV
2 Min Read
PM Narendra Modi speaks at16th ASEAN India Summit

ಬೆಂಗಳೂರು: ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೋಗುವ ಮತ್ತು ಬರುವ ರಸ್ತೆಗಳಲ್ಲಿ ಕೆಲ ಕಾಲ ಸಂಚಾರ ನಿರ್ಭಂದವಿರುತ್ತದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಬೇರೆ ರೂಟ್‍ಗಳಲ್ಲಿ ಓಡಾಡಿದರೆ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಬಹುದು.

ಬೆಂಗಳೂರಿನಲ್ಲಿ ಎರಡು ದಿನ ಪ್ರಧಾನಿ:
* ಗುರುವಾರ ಮಧ್ಯಾಹ್ನ 1:20ಕ್ಕೆ ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‍ಗೆ ಆಗಮನ
* ಮಧ್ಯಾಹ್ನ 1:25ಕ್ಕೆ ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‍ನಿಂದ ಮಿಗ್-17 ಹೆಲಿಕ್ಯಾಪ್ಟರ್‌ನಲ್ಲಿ ತುಮಕೂರಿನತ್ತ ಪಯಣ
* ಮಧ್ಯಾಹ್ನ 2 ಗಂಟೆಗೆ ತುಮಕೂರು ವಿವಿ ಹೆಲಿಪ್ಯಾಡ್‍ನಲ್ಲಿ ಲ್ಯಾಂಡಿಂಗ್
* ಮಧ್ಯಾಹ್ನ 2:15ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ (3:20ಕ್ಕೆ ಸಿದ್ದಗಂಗಾ ಮಠದಿಂದ ನಿರ್ಗಮನ)
* ಮಧ್ಯಾಹ್ನ 3:30ಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಎಂಟ್ರಿ
* ಕಿಸಾನ್ ಸಮ್ಮಾನ್‍ನ 4ನೇ ಕಂತಿನಲ್ಲಿ 6 ಕೋಟಿ ರೈತ ಕುಟುಂಬಗಳಿಗೆ 12 ಸಾವಿರ ಕೋಟಿ ನೇರ ಹಣ ವರ್ಗಾವಣೆ ಇದನ್ನೂ ಓದಿ: ರಾಜ್ಯಕ್ಕೆ ಆಗಮಿಸ್ತಿರೋ ಪ್ರಧಾನಿ ಮೋದಿ ಊಟದ ಮೆನು

siddaganga mutt

* ಆಯ್ದ 28 ರೈತರಿಗೆ ಕೃಷಿ ಕರ್ಮಣ್ ಪ್ರಶಸ್ತಿ ವಿತರಣೆ (ಮೀನು ಸಾಕಾಣಿದಾರರ ಸೌಲಭ್ಯಗಳ ವಿತರಣೆ ಸಮಾರಂಭಕ್ಕೆ ಚಾಲನೆ)
(ಸಂಜೆ 5:05 ನಿರ್ಗಮನ, 5:10ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್‍ಗೆ ಆಗಮಿಸಿ ಹೆಚ್‍ಎಎಲ್‍ಗೆ ಪಯಣ)
* ಸಂಜೆ 5:50ಕ್ಕೆ ಎಚ್‍ಎಎಲ್‍ನ ಡಿಆರ್‍ಡಿಇ ಯುವ ವಿಜ್ಞಾನಿಗಳ ಕಾರ್ಯಕ್ರಮದಲ್ಲಿ ಭಾಗಿ
* ರಾತ್ರಿ 7:05ಕ್ಕೆ ಡಿಆರ್‌ಡಿಓದಿಂದ ರಸ್ತೆ ಮೂಲಕ ನಿರ್ಗಮನ
* ರಾತ್ರಿ 7:20ಕ್ಕೆ ರಾಜಭವನಕ್ಕೆ ಆಗಮನ ಹಾಗೂ ವಾಸ್ತವ್ಯ (ಡಿಆರ್‌ಡಿಓದ ಸುರಂಜನ ದಾಸ್ ರಸ್ತೆ, ಹೆಚ್ ಎಎಲ್ ರಸ್ತೆ,ಎಂ.ಜಿ ರಸ್ತೆ, ರಾಜಭವನ ರಸ್ತೆ, ಸಂಚಾರ ನಿಷೇಧ)

vlcsnap 2018 09 22 08h37m28s108
* ಶುಕ್ರವಾರ ಬೆಳಗ್ಗೆ 9:40ಕ್ಕೆ ರಾಜಭವನದಿಂದ ರಸ್ತೆ ಮೂಲಕ ಹೆಬ್ಬಾಳದ ಜಿಕೆವಿಕೆಗೆ ಆಗಮನ (ಈ ವೇಳೆ ಬಳ್ಳಾರಿ ರಸ್ತೆಯಲ್ಲಿ ಸಂಚಾರ ನಿರ್ಬಂಧ)
* ಜಿಕೆವಿಕೆಯಲ್ಲಿ ಬೆಳಗ್ಗೆ 10:00ರಿಂದ 11:05 ವರೆಗೆ 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿ
* ಬೆಳಗ್ಗೆ 11:10ಕ್ಕೆ ರಸ್ತೆ ಮೂಲಕ ಎಚ್‍ಎಎಲ್‍ಗೆ ವಾಪಸ್
* ಬೆಳಗ್ಗೆ 11:30ಕ್ಕೆ ಹೆಚ್‍ಎಎಲ್‍ನಿಂದ ದೆಹಲಿಗೆ ಪ್ರಯಾಣ (ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್, ಎಚ್‍ಎಎಲ್ ರಸ್ತೆ, ದೊಮ್ಮಲೂರು, ಹೆಚ್‍ಎಎಲ್ ಮಾರ್ಗದಲ್ಲಿ ನಿರ್ಬಂಧ. ಹೀಗಾಗಿ, ಬದಲಿ ಮಾರ್ಗ ಬಳಸಿ)

Share This Article
Leave a Comment

Leave a Reply

Your email address will not be published. Required fields are marked *