ಮೂರು ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ – ಮಧುರೈ-ಬೆಂಗಳೂರು ರೈಲಿಗೂ ಹಸಿರು ಪತಾಕೆ ತೋರಿದ ಪ್ರಧಾನಿ

Public TV
2 Min Read
PM Narendra Modi flags off 3 new Vande Bharat

ನವದೆಹಲಿ: ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಂಪರ್ಕವನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 3 ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಶನಿವಾರ ಹಸಿರು ನಿಶಾನೆ ತೋರಿದರು.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೋದಿ ಚಾಲನೆ ನೀಡಿದರು. ಚೆನ್ನೈ ಸೆಂಟ್ರಲ್‌ನಿಂದ ನಾಗರ್‌ಕೋಯಿಲ್‌, ಮಧುರೈನಿಂದ ಬೆಂಗಳೂರು ಕಂಟೋನ್ಮೆಂಟ್‌ (Madhurai-Bengaluru Vande Bharat Express) ಮತ್ತು ಮೀರತ್ ಸಿಟಿ-ಲಕ್ನೋ ಸಂಪರ್ಕಿಸುವ ರೈಲುಗಳನ್ನು ಉದ್ಘಾಟಿಸಿದರು. ಇದನ್ನೂ ಓದಿ: ಬೆಂಗಳೂರಿಗೆ ಬರುತ್ತಿದ್ದ ವಿಮಾನದ ಇಂಜಿನ್ ಆಗಸದಲ್ಲೇ ವೈಫಲ್ಯ – ಕೋಲ್ಕತ್ತಾ ಏರ್‌ಪೋರ್ಟಲ್ಲಿ ಎಮರ್ಜೆನ್ಸಿ, ಸೇಫ್ ಲ್ಯಾಂಡಿಂಗ್

Narendra Modi in Fintech Fest 2024

ಮಧುರೈ-ಬೆಂಗಳೂರು ರೈಲು:
ಮಧುರೈ-ಬೆಂಗಳೂರು ಕಂಟೋನ್ಮೆಂಟ್ ರೈಲು ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ರೈಲು ಸಂಖ್ಯೆ 20671 ಮಧುರೈನಿಂದ ಮುಂಜಾನೆ 5:15 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ದಿಂಡುಗಲ್, ತಿರುಚಿರಾಪಳ್ಳಿ, ಕರೂರ್, ನಾಮಕ್ಕಲ್, ಸೇಲಂ ಮತ್ತು ಕೃಷ್ಣರಾಜಪುರಂನಲ್ಲಿ ನಿಲ್ಲುತ್ತದೆ. ಪ್ರತಿಯಾಗಿ (ಟ್ರೇನ್ ಸಂಖ್ಯೆ. 20672), ಇದು ಬೆಂಗಳೂರಿನಿಂದ ಮಧ್ಯಾಹ್ನ 1:30 ಕ್ಕೆ ಹೊರಡಲಿದೆ. ರಾತ್ರಿ 9:45ಕ್ಕೆ ಮಧುರೈಗೆ ತಲುಪಲಿದೆ.

ಚೆನ್ನೈ ಸೆಂಟ್ರಲ್‌-ನಾಗರ್‌ಕೋಯಿಲ್‌:
ನಾಗರ್‌ಕೋಯಿಲ್‌ಗೆ ಹೋಗುವ ರೈಲು ಆರಂಭದಲ್ಲಿ ಚೆನ್ನೈ ಸೆಂಟ್ರಲ್‌ನಿಂದ ಫ್ಲ್ಯಾಗ್ ಆಫ್ ಆಗಲಿದೆ. ಆದರೆ ಚೆನ್ನೈ ಎಗ್ಮೋರ್‌ನಿಂದ ನಿಯಮಿತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬುಧವಾರ ಹೊರತುಪಡಿಸಿ ಪ್ರತಿದಿನ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಕೇದಾರನಾಥ| ಏರ್‌ಲಿಫ್ಟ್ ವೇಳೆ ಹೆಲಿಕಾಪ್ಟರ್ ಪತನ – ಅಧಿಕಾರಿಗಳು ಹೇಳಿದ್ದೇನು?

ಈ ವಂದೇ ಭಾರತ್ ರೈಲು ಸೇವೆಯು ಯಾತ್ರಾರ್ಥಿಗಳಿಗೆ ದೈವಿಕ ಅರುಲ್ಮಿಗು ಮೀನಾಕ್ಷಿ ಅಮ್ಮನ್ ದೇವಸ್ಥಾನ, ಮಧುರೈ ಮತ್ತು ಕುಮಾರಿ ಅಮ್ಮನ್ ದೇವಸ್ಥಾನ, ಕನ್ನಿಯಾಕುಮಾರಿಗಳಿಗೆ ಪ್ರಯಾಣಿಸಲು ಅನುಕೂಲವಾಗುತ್ತದೆ.

ರೈಲು ಸಂಖ್ಯೆ 20627 ಚೆನ್ನೈ ಎಗ್ಮೋರ್‌ನಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 1:50 ಕ್ಕೆ ನಾಗರ್‌ಕೋಯಿಲ್ ತಲುಪುತ್ತದೆ. ತಾಂಬರಂ, ವಿಲ್ಲುಪುರಂ, ತಿರುಚಿರಾಪಳ್ಳಿ, ದಿಂಡುಗಲ್, ಮಧುರೈ, ಕೋವಿಲ್‌ಪಟ್ಟಿ ಮತ್ತು ತಿರುನಲ್ವೇಲಿಯಲ್ಲಿ ನಿಲುಗಡೆ ಇರುತ್ತದೆ. ಹಿಂದಿರುಗುವ ರೈಲು (ಸಂಖ್ಯೆ 20628) ನಾಗರ್‌ಕೋಯಿಲ್‌ನಿಂದ ಮಧ್ಯಾಹ್ನ 2:20 ಕ್ಕೆ ಹೊರಟು ರಾತ್ರಿ 11 ಗಂಟೆಗೆ ಚೆನ್ನೈ ತಲುಪಲಿದೆ.

ಮೀರತ್‌ ಸಿಟಿ-ಲಕ್ನೋ:
ಮೀರತ್ ಸಿಟಿ-ಲಕ್ನೋ ವಂದೇ ಭಾರತ್ ರೈಲು ಭಾನುವಾರ ಲಕ್ನೋದಿಂದ ಮತ್ತು ಸೋಮವಾರ ಮೀರತ್‌ನಿಂದ ತನ್ನ ನಿಯಮಿತ ಸೇವೆಯನ್ನು ಪ್ರಾರಂಭಿಸುತ್ತದೆ. ಇದು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ. ಈ ವಂದೇ ಭಾರತ್ ರೈಲು ದಿಗಂಬರ ಜೈನ ದೇವಾಲಯ, ಮಾನಸಾ ದೇವಿ ಮಂದಿರ, ಸೂರಜ್‌ಕುಂಡ್ ದೇವಾಲಯ ಮತ್ತು ಔಘರ್‌ನಾಥ ದೇವಾಲಯದಂತಹ ಯಾತ್ರಾ ಸ್ಥಳಗಳಲ್ಲಿ ಸಂಚರಿಸಿ ಧಾರ್ಮಿಕ ಪ್ರವಾಸೋದ್ಯಮ ಉತ್ತೇಜಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ

ರೈಲು ಸಂಖ್ಯೆ 22490 ಮೀರತ್ ನಗರದಿಂದ ಬೆಳಗ್ಗೆ 6:35 ಕ್ಕೆ ಹೊರಡುತ್ತದೆ. ಲಕ್ನೋದ ಚಾರ್ಬಾಗ್ ರೈಲು ನಿಲ್ದಾಣವನ್ನು ಮಧ್ಯಾಹ್ನ 1:45 ಕ್ಕೆ ತಲುಪುತ್ತದೆ. ಮೊರಾದಾಬಾದ್ ಮತ್ತು ಬರೇಲಿಯಲ್ಲಿ ನಿಲುಗಡೆ ಇರುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ (ರೈಲು ಸಂಖ್ಯೆ. 22489), ರೈಲು ಚಾರ್ಬಾಗ್ ರೈಲು ನಿಲ್ದಾಣದಿಂದ ಮಧ್ಯಾಹ್ನ 2:45 ಕ್ಕೆ ಹೊರಟು ರಾತ್ರಿ 10:00 ಕ್ಕೆ ಮೀರತ್ ನಗರವನ್ನು ತಲುಪುತ್ತದೆ.

Share This Article