Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ ಮೋದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ ಮೋದಿ

Districts

ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ ಮೋದಿ

Public TV
Last updated: May 3, 2018 6:46 pm
Public TV
Share
2 Min Read
modi
SHARE

ಕಲಬುರಗಿ: ಕರ್ನಾಟಕ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ರಾಷ್ಟ್ರೀಯತೆಯ ಬಣ ಪ್ರಯೋಗಿಸಿದ್ದಾರೆ.

ಕಲಬುರಗಿ ನಗರದ ಎನ್‍ವಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸೇನೆ ಹಾಗೂ ಯೋಧರ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ನಿಂದ ದೇಶಕ್ಕೆ ಗೌರವ ನೀಡುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

modi 2

ಕಲಬುರಗಿ ಜಿಲ್ಲೆ ಶರಣರು ಸಂತರು ನಡೆದಾಡಿದ ಪುಣ್ಯ ಭೂಮಿ. ಅನೇಕ ಮಹಾಪುರಷರು ನಡೆದಾಡಿದ ಈ ನೆಲಕ್ಕೆ ಜನರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಅವರು, ಇಂತಹ ಉರಿ ಬಿಸಿಲಲ್ಲೂ ಇಷ್ಟೊಂದು ಜನ ಸಮಾವೇಶದಲ್ಲಿ ಭಾಗವಹಿಸಿರುವುದನ್ನು ಗಮನಿಸಿದರೆ ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಇದು ಸಕಾಲ ಎಂದೇನಿಸುತ್ತಿದೆ. ಇದು ಕಾಂಗ್ರೆಸ್‍ಗೆ ಎಚ್ಚರಿಕೆಯ ಗಂಟೆ. ಹಲವು ಚುನಾವಣೆಗಳು ಈ ಹಿಂದೆ ಬಂದಿದೆ ಹೋಗಿದೆ. ಆದ್ರೆ ಕರ್ನಾಟಕದ ಜನತೆ ಈ ಬಾರಿ ಸರ್ಕಾರ ಬದಲಿಸುವ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯದ ನಾಲ್ಕು ಮೂಲೆಗಳಲ್ಲಿ ಕೇಸರಿ ಬಾವುಟ ಹಾರಿಸಲಿದ್ದೇವೆ. ಕರ್ನಾಟಕವನ್ನು ಲೂಟಿ ಹೊಡೆಯಲು ಬಿಡುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿಯಿಂದ ಜನರಲ್ಲಿ ಹೊಸ ವಿಶ್ವಾಸ ಮೂಡಿದೆ. ಈ ಚುನಾವಣೆ ಕರ್ನಾಟಕದ ಯುವಜನತೆಯ ಭವಿಷ್ಯ ನಿರ್ಧರಿಸಲಿದೆ. ಇಲ್ಲಿಯ ಯುವಕರಿಗೆ ತಮ್ಮ ಹಕ್ಕು ದೊರೆಯಬೇಕಾಗಿದೆ. ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಮನವಿ ಮಾಡಿದರು.

ಕಲಬುರಗಿ ಸಮಾವೇಶದಲ್ಲಿ ಜನರ ಉತ್ಸಾಹ ಅದ್ಭುತವಾಗಿತ್ತು. ಕರ್ನಾಟಕದಲ್ಲಿ @BSYBJP ಅವರ ನಾಯಕತ್ವದಲ್ಲಿ ಕಲಬುರಗಿಯ ಜನರು ಬಿಜೆಪಿ ಸರಕಾರವನ್ನು ನೋಡಬಯಸುತ್ತಾರೆ. ಕರ್ನಾಟಕದಲ್ಲಿ ಅಭಿವೃದ್ಧಿ ವಿರೋಧಿ ಮತ್ತು ರೈತ ವಿರೋಧಿ ಕಾಂಗ್ರೆಸ್ ಸರಕಾರವನ್ನು ನೋಡಿ ಜನ ರೋಸಿಹೋಗಿದ್ದಾರೆ. @BJP4Karnataka pic.twitter.com/pDhDrlATNZ

— Narendra Modi (@narendramodi) May 3, 2018

ಕಲಬುರಗಿ ಭಾರತ ಐಕ್ಯತೆಯ ಸಂಕೇತ: ಕಲಬುರಗಿಯೊಂದಿಗೆ ದೇಶದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ವಿಶೇಷವಾದ ನಂಟಿದೆ. ಸ್ವಾತಂತ್ರ್ಯ ನಂತರ ಹೈದರಾಬಾದ್ ನಿಜಾಮರು ಭಾರತದೊಂದಿಗೆ ವಿಲೀನಗೊಳ್ಳಲು ನಿರಾಕರಿಸಿದ್ದರು. ಈ ವೇಳೆ ಪಟೇಲರು ನಿಜಾಮ ಸೆದೆಬಡಿದು ಕಲಬುರಗಿಯನ್ನು ಭಾರತದೊಳಗೆ ವಿಲೀನಗೊಳಿಸಿದರು. ಕಲಬುರುಗಿ ವಿಲೀನ ನಂತರವೂ ನಿಜಾಮರು ಇಲ್ಲಿ ಹಿಂಸಾಚಾರ ನಡೆಸಿದ್ದರು. ಈ ವೇಳೆ ಹಲವು ಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಇದನ್ನು ನೆನೆಯಲು ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶವಿತ್ತು, ಆದ್ರೆ ಇದನ್ನು ಕಾಂಗ್ರೆಸ್ ಮಾಡಿಲ್ಲ. ದೇಶದ ಯೋಧರಿಗೆ ಕಾಂಗ್ರೆಸ್ ಅಗೌರವ ಸೂಚಿಸಿದೆ. ಸರ್ಜಿಕಲ್ ಸ್ಟ್ರೈಕ್ ವೇಳೆ ಸಾಕ್ಷ್ಯ ಕೇಳಿದರು. ಯೋಧರು ವಿರೋಧಿಗಳ ಮೇಲೆ ದಾಳಿ ನಡೆಸುವ ವೇಳೆ ಕ್ಯಾಮೆರಾ ತೆಗೆದುಕೊಂಡು ಹೋಗಬೇಕಾ ಅಥವಾ ಬಂದುಕು ತೆಗೆದುಕೊಂಡು ಹೋಗ ಬೇಕಾ ಎಂದು ಮೋದಿ ಪ್ರಶ್ನಿಸಿದರು.

ಪಾಟೇಲ್ ಅವರ ಹೆಸರು ಕೇಳಿದರೆ ಕಾಂಗ್ರೆಸ್ ಒಂದು ಪರಿವಾರಕ್ಕೆ ನಿದ್ದೆ ಬರುವುದಿಲ್ಲ. ಕಾಂಗ್ರೆಸ್ ಗೆ ಕರ್ನಾಟಕದ ಶ್ರೇಷ್ಠ ಸೇನಾ ಅಧಿಕಾರಿಗಳಾದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಗ್ಗೆಯೂ ಗೌರವವಿಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ಕಾಂಗ್ರೆಸ್ ಗೆ ದೇಶ ಪ್ರೇಮದ ಅರ್ಥ ಎನ್ ಗೊತ್ತು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

ಖರ್ಗೆ ಸಿಎಂ ಸ್ಥಾನ : ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತು ಎಷ್ಟಿದೆ ನಿಮಗೊತ್ತಾ ಎಂದು ಪ್ರಶ್ನಿಸಿರುವ ಮೂಲಕ ಪ್ರಧಾನಿ ಮೋದಿ ಖರ್ಗೆಗೆ ಟಾಂಗ್ ನೀಡಿದರು. ಈ ಹಿಂದೆ ಚುನಾವಣೆಯಲ್ಲಿ ದಲಿತರ ಕಲ್ಯಾಣ ಮಾಡುತ್ತೇವೆ ಎಂದು ಹೇಳಿ ಖರ್ಗೆ ಅವರನ್ನು ಸಿಎಂ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ ಅಧಿಕಾರ ಬಂದ ಮೇಲೆ ಗುಪ್ತ ಮತದಾನದ ಹೆಸರಿನಲ್ಲಿ ಖರ್ಗೆಯವರನ್ನು ಸಿಎಂ ಮಾಡದೇ ಕಾಂಗ್ರೆಸ್ ದಲಿತರಿಗೆ ಮೋಸ ಮಾಡಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕಮಲ ಅರಳುತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರ ಕುಟುಂಬ ಅರಳುತ್ತೆ ಎಂದು ಟಾಂಗ್ ನೀಡಿದರು.

glb 3

TAGGED:bjpcongresskalaburgikarnataka electionsnamma electionprime ministerPublic TVಕರ್ನಾಟಕ ಚುನಾವಣೆಕಲಬುರಗಿಕಾಂಗ್ರೆಸ್ನಮ್ಮ ಚುನಾವಣೆಪಬ್ಲಿಕ್ ಟಿವಿಪ್ರಧಾನಿ ಮೋದಿಬಿಜೆಪಿ
Share This Article
Facebook Whatsapp Whatsapp Telegram

Cinema news

rakshitha spandana
ಬಿಗ್‌ ಬಾಸ್‌ ಮನೆಯಲ್ಲಿ ಕಿತ್ತಾಡಿಕೊಂಡ ರಕ್ಷಿತಾ-ಸ್ಪಂದನಾ; ಮಾಳು ಹೊರಹೋಗೋದಕ್ಕೆ ಕಾರಣ ಯಾರು?
Cinema Latest Top Stories TV Shows
CM Nandini
ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು
Bengaluru City Cinema Crime Latest Main Post TV Shows
Raj B Shetty 1
ರಾಜ್ ಬಿ ಶೆಟ್ಟಿ ನಟನೆಯ ರಕ್ಕಸಪುರದೊಳ್ ರಿಲೀಸ್ ಡೇಟ್ ಫಿಕ್ಸ್
Cinema Latest Sandalwood Top Stories
K POP Kannada Movie
ಕೊರಿಯನ್ ಪಾಪ್ ಸಂಸ್ಕೃತಿ ಬಿಂಬಿಸುವ ಕನ್ನಡದ ʻಕೆ-ಪಾಪ್ʼ
Cinema Latest Sandalwood

You Might Also Like

Outrage against the government from those who lost their homes due to the 2019 rain and landslides in Chikkamagaluru Mudigere
Chikkamagaluru

ಕೇರಳಿಗರ ಮೇಲೆ ಪ್ರೀತಿ, ಮಲೆನಾಡಿಗರ ನಿರ್ಲಕ್ಷ್ಯ – 6 ವರ್ಷ ಕಳೆದ್ರೂ ಬತ್ತದ ಸಂತ್ರಸ್ತರ ಕಣ್ಣೀರು

Public TV
By Public TV
7 minutes ago
Koppala
Dharwad

ಹುಬ್ಬಳ್ಳಿ: ಝೀರೋ ಟ್ರಾಫಿಕ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ನವಜಾತ ಶಿಶು ಸಾವು

Public TV
By Public TV
11 minutes ago
S Madhu Bangarappa
Bengaluru City

ಹಳ್ಳಿ ಕಡೆ ಕಾಡಿನಲ್ಲಿ ಮನೆ ಕಟ್ಟಿಕೊಂಡ ರೀತಿಯೇ ಕೋಗಿಲು ಲೇಔಟ್ ಅಕ್ರಮ ಸಕ್ರಮಕ್ಕೆ ಕ್ರಮ: ಮಧು ಬಂಗಾರಪ್ಪ

Public TV
By Public TV
35 minutes ago
Bus Accident
Crime

ಹುಲಿಕಲ್ ಘಾಟ್‌ನಲ್ಲಿ‌ ಧರೆಗೆ ಬಸ್ ಡಿಕ್ಕಿ: ಮಗು ಸಾವು, ಮೂವರಿಗೆ ಗಂಭೀರ ಗಾಯ

Public TV
By Public TV
49 minutes ago
Madhu Bangarappa 1
Bengaluru City

ಒಂದೇ ಒಂದು ಮಗು ಇದ್ದರೂ ಸರ್ಕಾರಿ ಶಾಲೆ ಮುಚ್ಚೋದಿಲ್ಲ, ವಿಲೀನವೂ ಮಾಡಲ್ಲ: ಮಧು ಬಂಗಾರಪ್ಪ

Public TV
By Public TV
2 hours ago
Amit Shah
Latest

ಪ.ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದ್ರೆ, ನುಸುಳುಕೋರರ ತಡೆಗೆ ರಾಷ್ಟ್ರೀಯ ಗ್ರಿಡ್ ಸ್ಥಾಪನೆ – ಅಮಿತ್ ಶಾ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?