– ಭಾರತ ಈಗ ವಿಶ್ವದ ಕಾರ್ಖಾನೆಯಾಗುತ್ತಿದೆ; ಪ್ರಧಾನಿ ಬಣ್ಣನೆ
ನವದೆಹಲಿ: ಪ್ರಪಂಚದಾದ್ಯಂತದ ಜನರು ಭಾರತಕ್ಕೆ ಬರಲು ಇಚ್ಛಿಸುತ್ತಾರೆ ಮತ್ತು ಭಾರತವನ್ನು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಭಾರತವು ಪ್ರತಿದಿನ ಸಕಾರಾತ್ಮಕ ಸುದ್ದಿಗಳನ್ನು ಸೃಷ್ಟಿಸುತ್ತಿರುವ ವಿಶ್ವ ದೇಶವಾಗಿದೆ. ಇಲ್ಲಿ ಪ್ರತಿದಿನ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ.
Addressing the NXT Conclave in Delhi. @nxt_conclave https://t.co/kdcwYCuxYU
— Narendra Modi (@narendramodi) March 1, 2025
- Advertisement -
ಭಾರತ್ ಮಂಟಪದಲ್ಲಿ (Bharat Mantap) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೆಬ್ರವರಿ 26 ರಂದು ಪ್ರಯಾಗ್ರಾಜ್ನಲ್ಲಿ ಏಕತೆಯ ಮಹಾ ಕುಂಭ ಮೇಳ ಮುಕ್ತಾಯವಾಯಿತು. ನದಿ ದಂಡೆಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ಸ್ಥಳದಲ್ಲಿ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡಲು ಹೇಗೆ ಬರುತ್ತಾರೆ ಎಂಬುದನ್ನು ನೋಡಿ ಜಗತ್ತು ಬೆರಗುಗೊಂಡಿದೆ ಎಂದರು.
- Advertisement -
ಭಾರತದ ಸಂಘಟನಾ ಮತ್ತು ನಾವೀನ್ಯತೆ ಕೌಶಲ್ಯಗಳನ್ನು ಜಗತ್ತು ಗಮನಿಸುತ್ತಿದೆ. ಜಗತ್ತು ಈ ಭಾರತವನ್ನು ವಿವರವಾಗಿ ತಿಳಿದುಕೊಳ್ಳಲು ಬಯಸುತ್ತದೆ. ಭಾರತವು ವಿಶ್ವದ 7ನೇ ಅತಿದೊಡ್ಡ ಕಾಫಿ ರಫ್ತುದಾರ ರಾಷ್ಟ್ರವಾಗಿದೆ ದಶಕಗಳಿಂದ, ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಎಂದು ಕರೆಯುತ್ತಿತ್ತು. ಆದರಿಂದು ಭಾರತವು ವಿಶ್ವದ ಹೊಸ ಕಾರ್ಖಾನೆಯಾಗುತ್ತಿದೆ. ನಾವು ಕೇವಲ ಕಾರ್ಯಪಡೆಯಲ್ಲ, ನಾವು ವಿಶ್ವ ಶಕ್ತಿಯಾಗಿದ್ದೇವೆ ಎಂದು ಬಣ್ಣಿಸಿದರು.
- Advertisement -
- Advertisement -
ಇಂದು ಭಾರತವು ಬಹಳ ದೊಡ್ಡ ಗುರಿಗಳನ್ನು ಸಾಧಿಸಲು ಸಮರ್ಥವಾಗಿದೆ ಮತ್ತು ಅವುಗಳನ್ನು ಸಾಧಿಸುತ್ತಿದೆ. ಇದರ ತಿರುಳಿನಲ್ಲಿ ಒಂದು ವಿಶೇಷ ಮಂತ್ರವಿದೆ. ಈ ಮಂತ್ರ – ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ. ಇದು ದಕ್ಷ ಮತ್ತು ಪರಿಣಾಮಕಾರಿ ಆಡಳಿತದ ಮಂತ್ರ. ಕಳೆದ ದಶಕದಲ್ಲಿ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ದ ಸುಮಾರು 1,500 ಕಾನೂನುಗಳನ್ನು ರದ್ದುಪಡಿಸಿದ್ದೇವೆ. ಇವುಗಳಲ್ಲಿ ಹಲವು ಕಾನೂನುಗಳನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ರಚಿಸಲಾಗಿತ್ತು.
ಆ ಕಾಲದ ಸರ್ಕಾರ ಮತ್ತು ನಾಯಕರ ಬಗ್ಗೆ ನಾನು ಹೇಳಲು ಏನೂ ಇಲ್ಲ, ಇಂತಹ ಕಾನೂನಿನ ಬಗ್ಗೆ ಈ ಜನರು 75 ವರ್ಷಗಳ ಕಾಲ ಏಕೆ ಮೌನವಾಗಿದ್ದರು? ಎಂಬುದು ನನಗೆ ಹೆಚ್ಚಾಗಿ ಆಶ್ಚರ್ಯವಾಗಿದೆ. ಗುಲಾಮಗಿರಿ ಯುಗದ ಕಾನೂನುಗಳನ್ನು ರದ್ದುಗೊಳಿಸಿದ್ದು ನಮ್ಮ ಸರ್ಕಾರ ಎಂದರು.