ಪ್ರೋಟೋಕಾಲ್ ಉಲ್ಲಂಘಿಸಿದ, ಕಾಲಿಗೆ ನಮಸ್ಕರಿಸಲು ಮುಂದಾದವ್ರಿಗೆ ಮೋದಿ ಕ್ಲಾಸ್

Public TV
1 Min Read
MODI 4 1

ಬೆಂಗಳೂರು: ಎರಡು ದಿನಗಳ ಕಾಲ ರಾಜ್ಯಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಕೊಮ್ಮಘಟ್ಟ ಹೆಲಿಪ್ಯಾಡ್‍ನಿಂದ ಮೈಸೂರಿಗೆ ಹೊರಡುವಾಗ ಎರಡು ಘಟನೆಗಳಿಂದ ಒಂದು ಕ್ಷಣ ಗರಂ ಆಗಿದ್ರು.

MODI 2 copy

ಪ್ರೋಟೋಕಾಲ್ ಉಸ್ತುವಾರಿ ವಹಿಸಿಕೊಂಡಿದ್ದವರೇ ಮೋದಿ ನೋಡಿ ಖುಷಿಯಲ್ಲಿ ಪ್ರೋಟೋಕಾಲ್ ಮರೆತಿದ್ದು ಕಂಡುಬಂತು. ಲೈನ್‍ಅಪ್ ಮಾಡಿದ್ದ ಬಿಜೆಪಿ ಪ್ರಕಾಶ್, ತಾವೇ ಮುಂದೆ ಹೋಗಿ ಮೋದಿಗೆ ನಮಸ್ಕಾರ ಮಾಡಿದ್ರು. ಕೂಡಲೇ ಸಿಟ್ಟಾದ ಮೋದಿ, ನಿಮ್ಮ ಸ್ಥಳಕ್ಕೆ ವಾಪಸ್ ಹೋಗಿ. ನಾನು ಬರ್ತೀನಿ ಎಂದು ಸೂಚಿಸಿದ್ರು. ಅವರು ಸ್ವಸ್ಥಾನಕ್ಕೆ ಸೇರಿದ ನಂತರವಷ್ಟೇ ಮೋದಿ ಮುಂದೆ ನಡೆದ್ರು. ಇಷ್ಟೆಲ್ಲಾ ಆದ್ಮೇಲೂ ಬಿಜೆಪಿಯ ಪ್ರೋಟೋಕಾಲ್ ಉಸ್ತುವಾರಿ ಇಂದ್ರಕುಮಾರ್, ಮೋದಿಗೆ ಕಾಲಿಗೆ ಬೀಳಲು ಹೋದ್ರು. ಇವೆಲ್ಲಾ ಬೇಡ ಎಂದು ಪ್ರಧಾನಿ ಮತ್ತೆ ಗರಂ ಆದರು. ಇದನ್ನೂ ಓದಿ: ಇಷ್ಟು ಸಣ್ಣ ಇದ್ದೀರಿ ಯಾಕೆ..? – ಎಂಟಿಬಿ ಆರೋಗ್ಯದ ಗುಟ್ಟು ಕೇಳಿದ ಪ್ರಧಾನಿ ಮೋದಿ

MODI 3 copy

ಮೈಸೂರಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹಿರಿಯ ಶಾಸಕ ರಾಮದಾಸ್‍ರನ್ನು ಕರೆದು ಬೆನ್ನಿಗೆ ಪ್ರೀತಿಯಿಂದ ಗುದ್ದಿ ಪ್ರಧಾನಿ ಮಾತನಾಡಿಸಿದ್ರು. ಇದರಿಂದ ರಾಮದಾಸ್ ಫುಲ್ ಖುಷಿಯಾಗಿ ಹೋದ್ರು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮದಾಸ್, ಮೋದಿ ನನ್ನ ತಾಯಿಯನ್ನು ನೆನಪಿಸಿಕೊಂಡರು ಎನ್ನುತ್ತಾ ಕಣ್ಣೀರಿಟ್ಟರು.

ನಿಮ್ಮ ತಾಯಿ ಇದ್ದಾಗ ತಿಂಡಿ ತಂದುಕೊಡ್ತಿದ್ದೆ. ಈಗ ಮರೆತಿದ್ದೀಯಾ ಎಂದು ಮೋದಿ ನನ್ನನ್ನು ಪ್ರಶ್ನೆ ಮಾಡಿದ್ರು ಎನ್ನುತ್ತ ಭಾವುಕರಾದರು. ಇದನ್ನೂ ಓದಿ: ರಾಮ್‍ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ

Live Tv

Share This Article
Leave a Comment

Leave a Reply

Your email address will not be published. Required fields are marked *