ಹಿರಣ್ಯಕೇಶಿ ನದಿ, ಹೂಳೆಮ್ಮ ದೇವಾಲಯದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ!

Public TV
1 Min Read
ckd plastic muktha collage copy

ಬೆಳಗಾವಿ(ಚಿಕ್ಕೋಡಿ): ಹುಕ್ಕೇರಿ ಹಿರೇಮಠದಿಂದ ಆಯೋಜಿಸಿರುವ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನದಡಿಯಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ಹಾಗೂ ಸುಕ್ಷೇತ್ರ ಹೊಳೆಮ್ಮ ದೇವಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.

ಬೆಳಗಾವಿ ಜಿಲ್ಲಾ ಪಂಚಾಯತಿ ಸಿಇಓ ರಾಮಚಂದ್ರ ರಾವ್ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವತಃ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ರಾಮಚಂದ್ರನ ನದಿ ಸ್ವಚ್ಛತೆಯನ್ನು ಮಾಡಿದರು. ಸ್ವಚ್ಛತೆ ಸಂದರ್ಭದಲ್ಲಿ ಹುಕ್ಕೇರಿ ಸ್ವಾಮೀಜಿ ಅವರ ಬೆರಳಿಗೆ ಗಾಜು ಚುಚ್ಚಿ ರಕ್ತ ಬಂದ ಘಟನೆ ನಡೆಯಿತು.

ckd plastic muktha 2

ನದಿ ತಟದಲ್ಲಿರುವ ಸುಕ್ಷೇತ್ರ ಹೊಳೆಮ್ಮ ದೇವಸ್ಥಾನವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ 25 ಸಾವಿರ ಬಟ್ಟೆಯ ಬ್ಯಾಗ್ ಗಳನ್ನು ಹುಕ್ಕೇರಿ ಹಿರೇಮಠದ ವತಿಯಿಂದ ಅಂಗಡಿ ಮಾಲೀಕರಿಗೆ ನೀಡಲಾಯಿತು. ಪ್ಲಾಸ್ಟಿಕ್ ಎಲ್ಲರಿಗೂ ಮಾರಕವಾಗಿದ್ದು ಪ್ಲಾಸ್ಟಿಕ್ ಬಳಸುವುದನ್ನು ಜನ ನಿಲ್ಲಿಸಬೇಕು ಎಂದು ಸ್ವಾಮೀಜಿ ವಿನಂತಿಸಿಕೊಂಡರು.

ಕೇವಲ ದಂಡ ಹಾಕಿದರೆ ಪ್ಲಾಸ್ಟಿಕ್ ನಿಷೇಧ ಆಗುವುದಿಲ್ಲ. ಪ್ರೀತಿಯಿಂದ ಜನ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಜಿಲ್ಲೆಯ 9 ನದಿಗಳ ಸ್ವಚ್ಛತೆ ಕಡೆ ಗಮನ ಹರಿಸುವುದರ ಜೊತೆಗೆ ಜಾಗೃತಿ ಮೂಡಿಸಲಾಗುವುದು ಎಂದು ಸಿಇಒ ರಾಮಚಂದ್ರ ರಾವ್ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *