ಉಡುಪಿ: ಚಂದ್ರಗ್ರಹಣವನ್ನು ಕಣ್ತುಂಬ ನೋಡಿ ಸಂಭ್ರಮಿಸಿ. ನಸುಗೆಂಪು ಚಂದ್ರ ಕಣ್ಣು, ಮನಸ್ಸಿಗೆ ಹಿತ ಕೊಡುತ್ತಾನೆ. ಬರಿಯ ಕಣ್ಣಿನಲ್ಲಿ ನೋಡಿ ಎಂಜಾಯ್ ಮಾಡಿ ಎಂದು ಹಿರಿಯ ಭೌತಶಾಸ್ತ್ರಜ್ಞ ಡಾ. ಎಪಿ ಭಟ್ ಹೇಳಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಚಂದ್ರನಿಗೂ ಸಮುದ್ರದ ಅಲೆಗಳಿಗೂ ಸಂಬಂಧವಿದೆ. ಹೀಗಾಗಿ, ಕೊಂಚ ವ್ಯತ್ಯಾಸಗಳು ಸಂಭವಿಸಬಹುದು ಎಂದಿದ್ದಾರೆ. ಇದನ್ನೂ ಓದಿ: 800 ವರ್ಷ ಹಳೆಯ ಸೂಗೂರೇಶ್ವರ ದೇವಸ್ಥಾನಕ್ಕೆ ತಟ್ಟದ ಗ್ರಹಣ ದೋಷ – ವಿಶಿಷ್ಟ ವಾಸ್ತುಶಿಲ್ಪವೇ ಇಲ್ಲಿ ಶ್ರೀರಕ್ಷೆ
ಇದು ಪ್ರಕೃತಿಯ ಸುಂದರ ವಿದ್ಯಮಾನ, ನೋಡಿ ಆನಂದಿಸಬೇಕು. ಜನರು ಭಯಭೀತರಾಗುವುದು ಬೇಡ. ಪ್ರಕೃತಿಯಲ್ಲಿ ಹಲವಾರು ಏರಿಳಿತ ಇದ್ದೇ ಇರುತ್ತದೆ. ಹುಣ್ಣಿಮೆ ಅಮಾವಾಸ್ಯೆ ವೇಳೆ ಸಮುದ್ರದ ಅಲೆಯಲ್ಲಿ ವ್ಯತ್ಯಾಸ ಕಾಣುತ್ತದೆ. ಹುಣ್ಣಿಮೆಯನ್ನು ನಮ್ಮಲ್ಲಿ ಪವಿತ್ರ ದಿವಸ ಎನ್ನುತ್ತೇವೆ. ಹಾಲು ಬೆಳದಿಂಗಳಲ್ಲಿ ಕುಳಿತಾಗ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತದೆ. ಮನಸ್ಸಿಗೆ ಮುದ ಕೊಡುವಂತಹ ಕಾಲ. ಅದೇ ಪವಿತ್ರವಾದ ದಿವಸ ಎಂದು ತಿಳಿಸಿದ್ದಾರೆ.
ಭೂಮಿಯವರಿಗೆ ನಾಳೆ ಚಂದ್ರ ಖುಷಿ ಕೊಡುತ್ತಿದ್ದಾನೆ. ಇದರಿಂದ ಅವರಿಗೆ ಇವರಿಗೆ ತೊಂದರೆ ಅಂತ ಹೆದರ ಬೇಕಾಗಿಲ್ಲ. ಗ್ರಹಣ ಕಾಲದಲ್ಲಿ ಹೊಸದೇನು ಆಗುವುದಿಲ್ಲ. ಇದು ನೆರಳು ಬೆಳಕಿನ ಆಟ ಅಂತ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಇದರಲ್ಲಿ ಹೊಸದೇನು ಆಗುವುದಿಲ್ಲ. ಎಲ್ಲರೂ ನೋಡಿ ಆನಂದಿಸಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಕ್ತಚಂದ್ರಗ್ರಹಣ – ಬೀದರ್ನ ಐತಿಹಾಸಿಕ 9 ದೇವಸ್ಥಾನಗಳ ಬಾಗಿಲು ಬಂದ್
ಪೂಜೆ, ಜಪ-ತಪ ಮಾಡುವವರು ಮಾಡಿ. ಮನಸ್ಸಿನ ಏಕಾಗ್ರತೆಗೆ ಒಳ್ಳೆಯ ಸಮಯ. ನಮಗೆ ಬೇಕು ಅಂದಾಗ ಸಿಗಲ್ಲ. ಪ್ರಕೃತಿ ವಿದ್ಯಮಾನವನ್ನು ಸಂಭ್ರಮಿಸಿ ಎಂದು ಕರೆ ಕೊಟ್ಟಿದ್ದಾರೆ.