ಪುಣೆಯ ಕುಂದಮಲ ಪ್ರದೇಶದಲ್ಲಿರುವ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಹಳೆಯ ಸೇತುವೆ ಕುಸಿದಿದ್ದು ಹಲವಾರು ಪ್ರವಾಸಿಗರು ನದಿಗೆ ಬಿದ್ದಿದ್ದಾರೆ. ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿ ಸೌಂದರ್ಯ ವೀಕ್ಷಣೆಗೆ ಬಂದವರು ನದಿಯಲ್ಲೇ ಕೊಚ್ಚಿಹೋಗಿದ್ದಾರೆಂದು ವರದಿಗಳು ತಿಳಿಸಿವೆ. ಘಟನೆ ತಿಳಿದ ಕೂಡಲೇ ದೌಡಾಯಿಸಿರುವ ಸ್ಥಳೀಯ ಅಧಿಕಾರಿಗಳು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ಇದಕ್ಕೆ ಸ್ಥಳೀಯರೂ ಕೈಜೋಡಿಸಿದ್ದಾರೆ. ದುರ್ಘಟನೆಯನ್ನು ಬಿಚ್ಚಿಡುವ ಒಂದಿಷ್ಟು ಚಿತ್ರಗಳು ಇಲ್ಲಿವೆ ನೋಡಿ….