ಸಾಂದರ್ಭಿಕ ಚಿತ್ರ
ಭೋಪಾಲ್: ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದ ಹಸುವನ್ನು ದಂಪತಿ ತಮ್ಮ ಸಾಕು ನಾಯಿ ಜೊತೆ ಹೋಗಿದ್ದರು. ಈ ವೇಳೆ ದಂಪತಿಯ ಮೇಲೆ ದಾಳಿಗೆ ಮುಂದಾದ ಹುಲಿಗಳಿಂದ ನಾಯಿ ತನ್ನ ಮಾಲೀಕರ ಜೀವವನ್ನು ರಕ್ಷಿಸಿದೆ. ಮಧ್ಯ ಪ್ರದೇಶದ ಮಾಲ್ಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
- Advertisement 2
ಮಾಲ್ಡಾ ಜಿಲ್ಲೆಯಲ್ಲಿ ನಿವಾಸಿಗಳಾದ ಕುಂಜಿರಾಮ್ ಯಾದವ್ ಮತ್ತು ಆತನ ಪತ್ನಿ ಪೂಲ್ವತಿ ಯಾದವ್ ಅವರನ್ನು ನಾಯಿ ರಕ್ಷಿಸಿದೆ. ಗುರುವಾರ ಸಂಜೆ ತಮ್ಮ ಊರಿನ ಉಪ ಸರಪಂಚ್ ಅವರ ಹಸುವನ್ನು ಹುಡುಕಿಕೊಂಡು ಬರಲು ಕನ್ಹಾ ಅಭಯಾರಣ್ಯಕ್ಕೆ ದಂಪತಿ ತೆರೆಳಿದ್ದರು. ಆಗ ಅವರೊಂದಿಗೆ ಅವರು ಸಾಕಿದ್ದ ನಾಯಿ ಕೂಡ ಹೋಗಿತ್ತು. ಸೂರ್ಯ ಮುಳುಗಿದ ಬಳಿಕ ಕತ್ತಲಾಗುತ್ತಿದ್ದಂತೆ ಕಾಡಿನಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಅವರಿಗೆ ಹಸು ಕಂಡಿತ್ತು. ಬಳಿಕ ಅದನ್ನು ವಾಪಾಸ್ ಊರಿಗೆ ಕರೆತರುತ್ತಿರುವಾಗ ಎರಡು ಹುಲಿಗಳು ಅವರ ಮೇಲೆ ದಾಳಿ ನಡೆಸಲು ಕೂತಿದ್ದನ್ನು ದಂಪತಿ ಗಮನಿಸಿದರು. ಆಗ ಇನ್ನೇನು ಹುಲಿಗಳಿಗೆ ದಂಪತಿ ಬಲಿಯಾಗುತ್ತಾರೆ ಎನ್ನುವಷ್ಟರಲ್ಲಿ, ಸಾಕು ನಾಯಿ ಮುಂದೆ ಬಂದು ದಂಪತಿಯ ಜೀವ ಉಳಿಸಿದೆ.
- Advertisement 3
- Advertisement 4
ದಂಪತಿ ಮತ್ತು ಹುಲಿಗಳ ಮಧ್ಯದಲ್ಲಿ ನಿಂತು ನಾಯಿ ಒಂದೇ ಸಮನೆ ಬೊಗಳಲು ಆರಂಭಿಸಿದೆ. ಈ ವೇಳೆ ದಂಪತಿ ಮೇಲೆ ದಾಳಿ ಮಾಡಲು ನೋಡುತ್ತಿದ್ದ ಹುಲಿಗಳು ನಾಯಿ ಬೊಗಳುತ್ತಿದ್ದದನ್ನು ಕೇಳಿ ಗೊಂದಲಗೊಂಡಿವೆ. ಆಗ ನಿಧಾನಕ್ಕೆ ತನ್ನ ಮಾಲೀಕರು ಅಲ್ಲಿಂದ ತಪ್ಪಿಸಿಕೊಳ್ಳುವವರೆಗೂ ಬೊಗಳುತ್ತ ನಿಂತು ಬಳಿಕ ತಾನು ಕೂಡ ವ್ಯಾಘ್ರಗಳಿಂದ ತಪ್ಪಿಸಿಕೊಂಡು ಮನೆಗೆ ಮರಳಿದೆ.
ಹುಲಿಗಳಿಂದ ತಪ್ಪಿಸಿಕೊಂಡು ಬಂದಿದ್ದ ದಂಪತಿ ನಾಯಿ ಕಥೆ ಏನಾಯ್ತೋ ಎಂದು ಆತಂಕದಲ್ಲಿದ್ದರು. ಆದ್ರೆ ಮನೆಗೆ ಮರಳಿದ ನಾಯಿಯನ್ನು ನೋಡಿ ಮುದ್ದಾಡಿದ್ದಾರೆ. ಅಲ್ಲದೆ ಹುಲಿಗಳಿಂದ ತಪ್ಪಿಸಿಕೊಂಡು ಬರುತ್ತಿದ್ದ ವೇಳೆ ದಂಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ, ಬಹುಶಃ ನಾಯಿ ಬೊಗಳುವುದನ್ನು ಹುಲಿಗಳು ಕೇಳಿದ್ದು ಅದೇ ಮೊದಲ ಇರಬಹುದು. ಆದರಿಂದ ಗೊಂದಲಪಟ್ಟು ದಾಳಿ ಮಾಡದೇ ಹಿಂಜರಿದಿದೆ ಎಂದು ತಿಳಿಸಿದ್ದಾರೆ.