ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

Public TV
1 Min Read
MND RESCUE

ಮಂಡ್ಯ: ಪ್ರವಾಸಕ್ಕೆ ಬಂದಿದ್ದ ವೇಳೆ ಕಾಲು ಜಾರಿ ಜಲಪಾತದೊಳಗೆ ಬಿದ್ದ ವ್ಯಕ್ತಿಯೊಬ್ಬರು ಎರಡು ದಿನ ಬಂಡೆಯ ಮೇಲೆ ಕಾಲಕಳೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

MND RESCUE 1

 

ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ 37 ವರ್ಷದ ಖಾದರ್ ಕಳೆದ ಶನಿವಾರ ಗಗನಚುಕ್ಕಿಗೆ ಬಂದಿದ್ರು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ.

MND RESCUE 2

ಮೇಲಿಂದ ಬಿದ್ದ ರಭಸಕ್ಕೆ ಇವರ ಎಡಗೈ, ಕಾಲು ಮುರಿದು ಮೂರ್ಛೆ ತಪ್ಪಿದ್ದಾರೆ. ನಂತರ ಕಣ್ಣು ಬಿಟ್ಟು ನೋಡಿದಾಗ ಕತ್ತಲಾಗಿತ್ತು. ಎರಡು ದಿನ ಕೂಗಿಕೊಂಡರೂ, ಯಾರೊಬ್ಬರಿಗೂ ಇವರ ಚೀರಾಟ ಕೇಳಿಸಿಲ್ಲ.

MND RESCUE 3

ಖಾದರ್ ನೀರನ್ನೇ ಕುಡಿದು ಎರಡು ದಿನ ಕಾಲ ಕಳೆದಿದ್ದಾರೆ. ಇಂದು ಪ್ರವಾಸಿಗರು ಬಂದಿರೋದನ್ನ ಗಮನಿಸಿದ ಖಾದರ್, ತಾನು ಹಾಕಿಕೊಂಡಿದ್ದ ಕೆಂಪು ಬಟ್ಟೆಯನ್ನ ತೋರಿಸಿ ಕೂಗಿಕೊಂಡಿದ್ದಾರೆ.

MND RESCUE 5

ಇದನ್ನ ಗಮನಿಸಿದ ಸಾರ್ವಜನಿಕರು ಈ ಮಾಹಿತಿಯನ್ನ ಬೆಳಕವಾಡಿ ಪೊಲೀಸರಿಗೆ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು, ನುರಿತರನ್ನು ಜಲಪಾತದ ಕೆಳಕ್ಕೆ ಇಳಿಸಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಖಾದರ್ ಅವರನ್ನ ರಕ್ಷಣೆ ಮಾಡಿದ್ದಾರೆ.

MND RESCUE 10

MND RESCUE 4

MND RESCUE 6

MND RESCUE 7

MND RESCUE 8

MND RESCUE 9

MND RESCUE 11

MND RESCUE 12

MND RESCUE 13

Share This Article
Leave a Comment

Leave a Reply

Your email address will not be published. Required fields are marked *