Belgaum
ಬೆಳಗಾವಿ: 15 ಬೀದಿನಾಯಿಗಳ ದಾಳಿಗೆ ವ್ಯಕ್ತಿ ಬಲಿ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ನಡೆದಿದೆ.
34 ವರ್ಷದ ಹಸನ್ ಸಾಬ್ ಮೃತ ವ್ಯಕ್ತಿ. ಹಸನ್ ಸಾಬ್ ಮದ್ಯ ಸೇವಿಸಿ ಬಸ್ ನಿಲ್ದಾಣ ಬಳಿಯ ಫುಟ್ ಬಾತ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಈ ವೇಳೆ 15ಕ್ಕೂ ಬೀದಿ ನಾಯಿಗಳು ಹಸನ್ ಸಾಬ್ ಮೇಲೆ ದಾಳಿ ನಡೆಸಿವೆ. ಪರಿಣಾಮ ಅವರ ಮುಖ, ಶರೀರ ಹಾಗೂ ಗುಪ್ತಾಂಗವನ್ನು ಬೀದಿನಾಯಿಗಳು ಕಚ್ಚಿ ತಿಂದಿವೆ.
ಇದೇ ವೇಳೆಯಲ್ಲಿ ರಾತ್ರಿ ಗಸ್ತಿನಲ್ಲಿದ್ದ ಸಿಪಿಐ ಸಂಗನಗೌಡ ಹಸನ್ ಅವರನ್ನು ಬೈಲಹೊಂಗಲ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
