ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಮಗನಿಂದಲೇ ತಾಯಿಯ ಬರ್ಬರ ಹತ್ಯೆ!

Public TV
0 Min Read
BGK HH

ಬಾಗಲಕೋಟೆ: ಶೀಲ ಶಂಕಿಸಿ ತಾಯಿಯನ್ನೆ ಮಗ ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ.

ರುದ್ರವ್ವ ಹಡಪದ(48) ಕೆಲೆಯಾದ ದುರ್ದೈವಿ ಮಹಿಳೆ. ಸದ್ಯ ಆರೋಪಿ ಮಗ ಮಹಾಂತೇಶ್ ಹಡಪದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಗ ಮಹಾಂತೇಶ್ ಹಡಪದ ಮೊದಲಿನಿಂದಲೂ ತಾಯಿ ರುದ್ರವ್ವಳ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸ್ತಿದ್ದನು. ಹೀಗಾಗಿ ನಿನ್ನೆ ರಾತ್ರಿ ರುದ್ರವ್ವ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಕಬ್ಬಿಣದ ರಾಡ್ ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆಗೈದಿದ್ದಾನೆ ಎಂಬುವುದಾಗಿ ತಿಳಿದುಬಂದಿದೆ.

ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

BGK MURDER AV 4

BGK MURDER AV 2

BGK MURDER AV 1

BGK MURDER AV

Share This Article
Leave a Comment

Leave a Reply

Your email address will not be published. Required fields are marked *