ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ: ಚಕ್ರಕ್ಕೆ ಸಿಲುಕಿ ಓರ್ವ ಸಾವು

Public TV
1 Min Read
12090005

ಬಳ್ಳಾರಿ: ಭಾನುವಾರದಂದು ಜಿಲ್ಲೆಯ ದೇವಾಲಯಗಳ ನಗರ ಕುರುಗೋಡಿನಲ್ಲಿ ನಡೆದ ದೊಡ್ಡಬಸವೇಶ್ವರ ರಥೋತ್ಸವದಲ್ಲಿ ರಥದ ಚಕ್ರಕ್ಕೆ ಸಿಲುಕಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿರುಗುಪ್ಪ ತಾಲೂಕಿನ ಸಿರಿಗೆರೆ ಗ್ರಾಮದ ನಿವಾಸಿ ಸಿದ್ದಲಿಂಗಪ್ಪ (25) ಮೃತ ಯುವಕ. ತೇರನ್ನು ಎಳೆಯುವಾಗ ನೋಡಲು ಬಂದ ಸಿದ್ದಲಿಂಗಪ್ಪ ತೇರಿಗೆ ಹಾಕುತ್ತಿದ್ದ ಸನ್ನೆ ಸಲಕರಣೆ ತಗುಲಿ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ಎರಡೂ ಕಾಲುಗಳಿಗೆ ತೀವ್ರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಿದ್ದಲಿಂಗಪ್ಪ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

612a646d 4527 409e a762 84e0e98c70d5

ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆ ದಿನ ಕುರುಗೋಡು ದೊಡ್ಡ ಬಸವೇಶ್ವರ ರಥೋತ್ಸವ ನಡೆಯುತ್ತದೆ. ಈ ಬಾರಿಯೂ ಕೂಡ ರಾಜ್ಯದ ವಿವಿಧಡೆಯಿಂದ ಬಂದ ಸಾವಿರಾರು ಭಕ್ತರು ವರ್ಣಾಲಂಕೃತ ರಥೋತ್ಸವಕ್ಕೆ ಹಣ್ಣು, ಹೂ ಎಸೆದು ಭಕ್ತಿ ಅರ್ಪಿಸಿದರು. ಒಂದು ವಾರದ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಸುತ್ತ ಮುತ್ತಲಿನ ಹಳ್ಳಿಗಳ ಜನತೆ ತಮ್ಮ ಕೃಷಿಗೆ ಅಗತ್ಯವಾದ ಸಾಮಾಗ್ರಿಗಳನ್ನು ಈ ಜಾತ್ರೆಯಲ್ಲಿ ಖರೀದಿಸುತ್ತಾರೆ.

ಇದನ್ನೂ ಓದಿ: ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

Share This Article
Leave a Comment

Leave a Reply

Your email address will not be published. Required fields are marked *