ವ್ಯಕ್ತಿಯ ಬೆನ್ನಿನ ಭಾಗಕ್ಕೆ ಮಚ್ಚಿನಿಂದ ಹಲ್ಲೆಗೈದ್ರು

Public TV
1 Min Read
long attack

ಬೆಂಗಳೂರು: ವ್ಯಕ್ತಿಯೊಬ್ಬರಿಗೆ ಮೂರು ಜನ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಗರದ ಮೈಸೂರು ರಸ್ತೆಯ ಆರ್.ವಿ.ಕಾಲೇಜ್ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದೆ.

ಕೆಂಗೇರಿ ನಿವಾಸಿ ಶೇಖ್ ನವಾಜ್ ಹಲ್ಲೆಗೊಳಗಾದ ವ್ಯಕ್ತಿ. ಶೇಖ್ ನಗರದಲ್ಲಿ ಫ್ಯಾಬಿಕ್ರೇಷನ್ ಕೆಲಸ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ಕೆಲಸ ಮುಗಿಸಿಕೊಂಡು ಬರುವಾಗ ಮೈಸೂರು ರಸ್ತೆಯ ಆರ್.ವಿ.ಕಾಲೇಜಿನ ಮುಂಭಾಗ ಕಾದು ಕುಳಿತಿದ್ದ ಮೂರು ಜನ ದುಷ್ಕರ್ಮಿಗಳು ಬೆನ್ನಿನ ಭಾಗಕ್ಕೆ ಮಚ್ಚನಿಂದ ಹಲ್ಲೆ ಮಾಡಿದ್ದಾರೆ.

Long attack 2

ಹಲ್ಲೆಗೊಳಗಾದ ಶೇಕ್ ನವಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದು, ಪೊಲೀಸ್ರು ಮಾಹಿತಿ ಪಡೆದು ಇಂದು ಬೆಳಗ್ಗೆ ಕೇಸ್ ದಾಖಲಿಕೊಳ್ಳುವುದಾಗಿ ತಿಳಿಸಿದ್ದಾರೆ.

ಶೇಕ್ ನವಾಜ್ ಎರಡು ಮದುವೆಯಾಗಿದ್ದು, ಕೆಲವು ದಿನಗಳ ಹಿಂದೆ ಎರಡನೇ ಹೆಂಡತಿಯ ನಡುವೆ ಜಗಳ ಆಗಿದೆ. ಈ ಹಿನ್ನೆಲೆ ಎರಡನೇ ಹೆಂಡತಿ ಕಡೆಯವರೇ ಹಲ್ಲೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

Long attack 1

Share This Article
Leave a Comment

Leave a Reply

Your email address will not be published. Required fields are marked *