ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

Public TV
1 Min Read
MYS CHINNAKE HUDUKATA COLLAGE

ಮೈಸೂರು: ಅಪ್ಪ-ಮಗ ಕದ್ದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾಲನ್ನು ಕೆರೆಯಲ್ಲಿ ಅಡಗಿಸಿಟ್ಟಿದ್ದಾರೆಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರಿನಲ್ಲಿ ಮುಳುಗೇಳುವ ಮೂಲಕ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

MYS CHINAKKE HUDUKATA 3

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯಲ್ಲಿ ಈ ಹುಡುಕಾಟ ನಡೆದಿದೆ. ಕೊಳಚೆ ನೀರು ತುಂಬಿದ್ದ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕೆರೆಯ ಬಳಿ ಜಮಾವಣೆಯಾದ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

ಪೊಲೀಸರು ಬರುತ್ತಿದ್ದಂತೆ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಕಳ್ಳ ಮಾಲಿನ ಹುಡುಕಾಟದ ವಿಚಾರ ತಿಳಿದು ಬೇಸ್ತು ಬಿದ್ದ ಪೊಲೀಸರು, ಕೆರೆಯಲ್ಲಿ ಯಾರೂ ಕೂಡ ಕದ್ದ ಮಾಲನ್ನು ಅಡಗಿಸಿಟ್ಟಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

MYS CHINAKKE HUDUKATA 2

MYS CHINAKKE HUDUKATA 1

MYS CHINAKKE HUDUKATA 4

Share This Article
Leave a Comment

Leave a Reply

Your email address will not be published. Required fields are marked *