ಚಿತ್ರದುರ್ಗ: ಬೇಟೆಗಾರರ ತಂತಿ ಉರುಳಿಗೆ ಸಿಲುಕಿ ಪರದಾಡುತ್ತಿದ್ದ ನವಿಲನ್ನು ಚಿತ್ರದುರ್ಗದಲ್ಲಿ ರಕ್ಷಣೆ ಮಾಡಲಾಗಿದೆ.
ಚಿತ್ರದುರ್ಗ ಹೊರವಲಯದ ಜೋಗಿಮಟ್ಟಿ ಅರಣ್ಯ ಸಮೀಪದ ಜಮೀನಿನಲ್ಲಿ ಬೇಟೆಗಾಗಿ ಹಾಕಿದ್ದ ತಂತಿಯಲ್ಲಿ ಸಿಲುಕಿ ನವಿಲು ಪ್ರಾಣಾಪಾಯದಲ್ಲಿತ್ತು. ನವಿಲು ಒದ್ದಾಡುತ್ತಿರುವುದನ್ನು ವಾಯುವಿಹಾರಿಗಳು ಗನಿಸಿದ್ದಾರೆ. ಅಲ್ಲದೇ ಅದನ್ನು ರಕ್ಷಣೆ ಮಾಡುವ ಮೂಲಕ ನಮ್ಮ ರಾಷ್ಟ್ರೀಯ ಪಕ್ಷಿಯ ಜೀವ ಉಳಿಸಿದ್ದಾರೆ. ಬಳಿಕ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಜೋಗಿಮಟ್ಟಿ ಅರಣ್ಯ ಪ್ರದೇಶ ನವಿಲುಗಳ ಆವಾಸಸ್ಥಾನವಾಗಿದೆ. ಆದ್ರೆ ಇದೀಗ ನೀರು, ಆಹಾರ ಅರಸಿ ಕಾಡು ಪ್ರಾಣಿ-ಪಕ್ಷಿಗಳು ನಗರ ಪ್ರದೇಶದತ್ತ ಬರುತ್ತಿದ್ದು, ಬೇಟೆಗಾರರ ಬಲೆಗೆ ಸಿಲುಕಿ ಅವನತಿಯತ್ತ ಸಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv