ಪ್ರಾಣವನ್ನು ಲೆಕ್ಕಿಸದೇ ಹೆದ್ದಾರಿ ಮೇಲೆ ಬಿದ್ದಿದ್ದ ಈರುಳ್ಳಿ ಆಯ್ದುಕೊಂಡ ಜನರು

Public TV
0 Min Read
NML ONION

ಬೆಂಗಳೂರು: ಪ್ರಾಣವನ್ನು ಲೆಕ್ಕಿಸದೇ ರಸ್ತೆ ಮೇಲೆ ಬಿದ್ದ ಈರುಳ್ಳಿ ಆಯ್ದುಕೊಳ್ಳಲು ಸಾರ್ವಜನಿಕರು ಮುಂದಾದ ಘಟನೆ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿನಿಂದ ತುಮಕೂರು ಕಡೆಗೆ ಈರುಳ್ಳಿ ತುಂಬಿದ್ದ ವಾಹನ ಹೋಗಿದೆ. ಚಾಲಕನ ಅರಿವಿಗೆ ಬಾರದೆ ವಾಹನದಿಂದ ಈರುಳ್ಳಿ ಮೂಟೆಗಳು ಗುಂಡೇನಹಳ್ಳಿ ಬಳಿಯ ನಾಲ್ಕೈದು ಸ್ಥಳಗಳಲ್ಲಿ ಉರುಳಿ ಬಿದ್ದಿದ್ದವು

ಮೂಟೆ ಕೆಳಗೆ ಬಿಳುತ್ತಿದಂತೆ ಈರುಳ್ಳಿ ರಸ್ತೆಯ ಬದಿಗೆ ಹಾಗೂ ಮಧ್ಯದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹೆದ್ದಾರಿಯಲ್ಲಿ ಭಾರೀ ಗಾತ್ರದ ವಾಹಗಳು ಸಂಚಾರ ದಟ್ಟನೆ ನಡುವೆಯೇ ಸ್ಥಳೀಯರು ಹಾಗೂ ಕೆಲ ಪ್ರಯಾಣಿಕರು ಈರುಳ್ಳಿ ಆಯ್ದು ಚೀಲಗಳಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *