ತುಮಕೂರು: ಇಂದು ಅಮ್ಮಂದಿರ ದಿನ, ಹೆತ್ತು- ಹೊತ್ತು, ಸಾಕಿ- ಸಲುಹಿದ ಮಾತೃದೇವತೆಯ ನೆನೆಯುವ ದಿನವಾಗಿದೆ. ಆದರೆ ಕಲ್ಪತರುನಾಡಿನಲ್ಲಿ ದಿನೇ ದಿನೇ ಕರುಣೆ ಇಲ್ಲದ ಅಮ್ಮಂದಿರರ ಸಂಖ್ಯೆ ಹೆಚ್ವಾಗುತ್ತಿವೆ.
ಹೌದು, ತುಮಕೂರಿನಲ್ಲಿ ಅಮ್ಮಂದಿರಿಗೆ ಕರುಣೆ ಇಲ್ಲವಾಗ್ತಾ ಇದೆಯಾ? ಕರುಣೆ ಇಲ್ಲದ ಅಮ್ಮನಿಂದ ತಿಪ್ಪೆ, ಚರಂಡಿ, ಬೀದಿ ಬೀದಿಗಳಲ್ಲಿ ಕರುಳಿನ ಬಳಿಗಳು ಬಿದ್ದು ಒದ್ದಾಡುತ್ತಿವೆ. ಕೆಲವಡೆ ಇರುವೆ, ನಾಯಿ, ಬೆಕ್ಕುಗಳ ಪಾಲಾಗಿವೆ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 35 ಕಂದಮ್ಮಗಳು ತಾಯಂದಿರರಿಂದ ದೂರವಾಗಿದೆ. ಅದರಲ್ಲಿ 25 ಶಿಶುಗಳನ್ನ ಹೆಣ್ಣೆಂಬ ಕಾರಣಕ್ಕೆ ಬೀದಿಯಲ್ಲಿ ಬಿಟ್ಟು ಹೋಗಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ ತಿಳಿಸಿದ್ದಾರೆ.
ಇವುಗಳಲ್ಲಿ ಬೀದಿಯಲ್ಲಿ ಬಿದ್ದ ಸುಮಾರು 11 ಶಿಶುಗಳು ಪ್ರಾಣಿ, ಪಕ್ಷಿಗಳ ದಾಳಿಗೆ ತುತ್ತಾಗಿವೆ. ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಮನೋಭಾವ ಈ ಪ್ರಕರಣಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು ತಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿ ಸಾಕಲು ಸಾಧ್ಯವಾಗದ ಸುಮಾರು 15 ಮಕ್ಕಳನ್ನು ಪೋಷಕರು ಮಕ್ಕಳ ಕಲ್ಯಾಣ ಸಮಿತಿಗೆ ಕೊಟ್ಟು ಹೋಗಿದ್ದಾರೆ. ಅಮ್ಮಂದಿರ ದಿನದಂದು ನಿಜಕ್ಕೂ ಈ ಅಂಕಿ ಅಂಶ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.