ಮಂಡ್ಯ: ಸಮರ್ಪಕವಾಗಿ ಮಳೆಯಾಗದೇ ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಇಂದು ಬ್ರಾಹ್ಮಣ ಸಭಾದಿಂದ ಪರ್ಜನ್ಯ ಪೂಜೆ ಮಾಡಲಾಯಿತು.
ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾನ ಘೋಸಾಯಿ ಘಾಟ್ ನ ಕಾವೇರಿ ನದಿ ತೀರದಲ್ಲಿ ಪರ್ಜನ್ಯ ಪೂಜೆ ನಡೆಯಿತು. ವೇದ ಬ್ರಹ್ಮ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ಐವತ್ತಕ್ಕೂ ಹೆಚ್ಚು ಬ್ರಾಹ್ಮಣರಿಂದ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮೊದಲು ನದಿ ದಡದಲ್ಲಿ ಪೂಜೆ ಸಲ್ಲಿಸಿ ಬಳಿಕ ಕಾವೇರಿ ನದಿಗೆ ಇಳಿದು ಮಂತ್ರ ಪಠಿಸಿದ್ರು. ಈ ವರ್ಷವಾದ್ರೂ ಉತ್ತಮ ಮಳೆಯಾಗಿ ನಾಡಿನ ಜನರ ರಕ್ಷಣೆ ಆಗಲಿ ಅಂತಾ ಪ್ರಾರ್ಥಿಸಿಕೊಳ್ಳಲಾಯ್ತು.