Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಏಷ್ಯಾ ಕಪ್-2020ರ ಭವಿಷ್ಯ ಭಾರತ, ಪಾಕ್ ನಡುವಿನ ನಿರ್ಧಾರವಲ್ಲ: ಪಿಸಿಬಿ ಅಧ್ಯಕ್ಷ

Public TV
Last updated: April 15, 2020 4:16 pm
Public TV
Share
2 Min Read
India Vs Pakistan Cricket
SHARE

ಇಸ್ಲಾಮಾಬಾದ್: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಯೋಜನೆಯ ಕುರಿತು ಕೇಳಿ ಬರುತ್ತಿರುವ ಸುದ್ದಿಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಎಹ್ಸಾನ್ ಮನಿ ಸ್ಪಷ್ಟನೆ ನೀಡಿದ್ದು, ಟೂರ್ನಿ ಆಯೋಜಿಸುವುದು ಅಥವಾ ಬಿಡುವುದು ಕೇವಲ ಭಾರತ-ಪಾಕಿಸ್ತಾನ ನಡುವಿನ ನಿರ್ಧಾರವಲ್ಲ ಎಂದಿದ್ದಾರೆ.

ಎಲ್ಲವೂ ಅಂದುಕೊಂಡದಂತೆ ನಡೆದಿದ್ದರೆ ಸೆಪ್ಟೆಂಬರ್ ತಿಂಗಳಲ್ಲಿ ಯುಎಇನಲ್ಲಿ 2020ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲು ಪಿಸಿಬಿ ಸಿದ್ಧತೆ ನಡೆಸಬೇಕಿತ್ತು. ಆದರೆ ಕೋವಿಡ್-12 ಸೋಂಕಿನ ಪರಿಣಾಮ ಕ್ರೀಡಾ ಜಗತ್ತು ತಲ್ಲಣಿಸಿದೆ. ಈಗಾಗಲೇ ಹಲವು ಟೂರ್ನಿಗಳನ್ನು ಮುಂದೂಡಲಾಗಿದ್ದರೆ. ಮತ್ತಷ್ಟು ಟೂರ್ನಿಗಳು ರದ್ದಾಗಿದೆ. ಬಿಸಿಸಿಐ ಕೂಡ ಮಹತ್ವದ ಐಪಿಎಲ್ ಟೂರ್ನಿಯನ್ನು ನಿರ್ದಿಷ್ಟಾವಧಿಗೆ ಮುಂದೂಡಿದೆ.

Ehsan Mani Pak PCB

ಕೆಲ ದಿನಗಳ ಹಿಂದೆ ಏಷ್ಯಾ ಕಪ್ ಆಯೋಜನೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಎಹ್ಸಾನ್ ಮನಿ, ಮಾಧ್ಯಮಗಳ ಸುದ್ದಿಗಳಿಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಟೂರ್ನಿ ಆಯೋಜನೆಯ ಕುರಿತು ಪ್ರಕಟವಾಗಿರುವ ವರದಿಗಳ ಮಾಹಿತಿ ಪಡೆದಿದ್ದೇನೆ. ಆದರೆ ಈ ವೇಳೆ ಟೂರ್ನಿಯನ್ನು ಏರ್ಪಡಿಸುವುದು ಅಥವಾ ರದ್ದು ಮಾಡುವುದು ಭಾರತ ಹಾಗೂ ಪಾಕ್ ನಡುವಿನ ನಿರ್ಧಾರವಲ್ಲ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಇತರೆ ದೇಶಗಳು ಕೂಡ ಅಭಿಪ್ರಾಯ ತಿಳಿಸಬೇಕಿದೆ ಎಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಏಷ್ಯಾ ಟೂರ್ನಿಯನ್ನು ಆಯೋಜಿಸುವುದು ಏಷ್ಯಾ ಕ್ರಿಕೆಟ್ ರಾಷ್ಟ್ರಗಳಿಗೆ ಅಗತ್ಯ. ಏಕೆಂದರೆ ಕೋವಿಡ್ ಬಳಿಕ ನಡೆಯಬೇಕಾದ ಪ್ರಮುಖ ಹಾಗೂ ಮೊದಲ ಟೂರ್ನಿ ಇದಾಗಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್‍ನಲ್ಲಿ ಸದಸ್ಯರಾಗಿರುವ ಎಲ್ಲಾ ರಾಷ್ಟ್ರಗಳಿಗೂ ಟೂರ್ನಿ ಮಹತ್ವದಾಗಿದೆ. ಟೂರ್ನಿ ಆಯೋಜಿಸುವುದು ಕೂಡ ಬಹುದೊಡ್ಡ ಸವಾಲು ಎಂದು ಅಭಿಪ್ರಾಯ ಪಟ್ಟಿದ್ದಾರೆ.

asia cup

ವಿಶ್ವದಲ್ಲಿ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿ ನಿವಾರಣೆಯಾದ ಬಳಿಕ ಯುಎಇ ಅಥವಾ ಬಾಂಗ್ಲಾದೇಶದಲ್ಲಿ ಟೂರ್ನಿ ಆಯೋಜಿಸುವ ಸಾಧ್ಯಗಳು ಇದೆ. ಕೊರೋನಾ ಅತೋಟಿಗೆ ಬಂದ ಕೂಡಲೇ ನಾವು ಟೂರ್ನಿ ಆಯೋಜಿಸಬಹುದಾಗಿದೆ. ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ವಿಧಿಸಿರುವ ನಿರ್ಬಂಧಗಳು ನಿವಾರಣೆಯಾದ ಬಳಿಕ ಟೂರ್ನಿ ಆಯೋಜಿಸಿದರೆ ಸದಸ್ಯ ರಾಷ್ಟ್ರಗಳಿಗೆ ಆರ್ಥಿಕವಾಗಿ ಸಮರ್ಥವಾಗಲಿದೆ ಎಂದಿದ್ದಾರೆ.

ಇದೇ ವೇಳೆ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ರದ್ದಾದರೆ ಕ್ರಿಕೆಟ್ ಸಂಸ್ಥೆಗಳಿಗೆ ಭಾರೀ ನಷ್ಟವಾಗಲಿದೆ. ಇಂತಹ ಸ್ಥಿತಿಯಲ್ಲೂ ಐಸಿಸಿ ಒಪ್ಪಂದದಂತೆ ಹಣ ಸಂದಾಯ ಮಾಡಿದೆ. ಪಾಕ್ ಕೂಡ 7ರಿಂದ 8 ಮಿಲಿಯನ್ ಮೊತ್ತವನ್ನು ಪಡೆದುಕೊಂಡಿದ್ದೇವೆ. ಸಂಸ್ಥೆ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಲ್ಲದೇ ಟೂರ್ನಿ ನಡೆಸುವ ಐಸಿಸಿ ಚಿಂತನೆಯನ್ನು ಎಹ್ಸಾನ್ ಮನಿ ತಿರಸ್ಕರಿಸಿದ್ದಾರೆ. 2023 ರಿಂದ 2031ರ ವೇಳೆಯ ಐಸಿಸಿ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಪಾಕ್ ನೆಲದಲ್ಲಿ ನಡೆಸುವ ಚಿಂತನೆಯೂ ಇದೆ ಎಂದಿದ್ದಾರೆ.

PCB ICC BCCI

TAGGED:asia cupcricketEhsan maniIslamabadpakistanPCBT20 World Cupಇಸ್ಲಾಮಾಬಾದ್ಎಹ್ಸಾನ್ ಮನಿಏಷ್ಯಾ ಕಪ್ಕ್ರಿಕೆಟ್ಟಿ20 ವಿಶ್ವಕಪ್ಪಾಕಿಸ್ತಾನಪಿಸಿಬಿ
Share This Article
Facebook Whatsapp Whatsapp Telegram

Cinema Updates

Mangli 2
ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ
2 hours ago
Singer Mangli
ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!
18 hours ago
Katrina Kaif
ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ
1 day ago
ZEE Kannada 2
ಹೊಸ ಅಧ್ಯಾಯಕ್ಕೆ ʻಜೀ ಕನ್ನಡʼ ಮುನ್ನುಡಿ…
2 days ago

You Might Also Like

Hubballi Rain Death 1
Crime

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ – ಚರಂಡಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

Public TV
By Public TV
13 minutes ago
Pradeep Eshwar 1 2
Bengaluru City

ಮೋದಿ 11 ವರ್ಷದಲ್ಲಿ ಸಾಧನೆಗಳನ್ನ ಕಡಿದು ಕಟ್ಟೆ ಹಾಕಿದ್ದಾರೆ – ದೇಶದ ಭದ್ರತೆ, ರೈತರ ವಿಚಾರದಲ್ಲಿ ಕೇಂದ್ರ ಫೇಲ್: ಪ್ರದೀಪ್‌ ಈಶ್ವರ್‌

Public TV
By Public TV
18 minutes ago
Siddaramaiah and Chandrababu Naidu
Bengaluru City

ರಾಜ್ಯದ ತೋತಾಪುರಿ ಮಾವು ಬೆಲೆ ಕುಸಿತ – ಆಂಧ್ರ ಸಿಎಂಗೆ ಸಿದ್ದರಾಮಯ್ಯ ಪತ್ರ

Public TV
By Public TV
1 hour ago
USA Pakistan
Latest

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

Public TV
By Public TV
1 hour ago
sambhajinagar
Latest

ಮಹಾರಾಷ್ಟ್ರ | ಭಾರೀ ಮಳೆ ಗಾಳಿಗೆ ಪ್ರವೇಶ ದ್ವಾರ ಕುಸಿದು ಮೂವರು ಬಲಿ

Public TV
By Public TV
2 hours ago
Weather 1
Bengaluru City

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಜೂ.15 ರವರೆಗೆ ಭಾರೀ ಮಳೆ ಮುನ್ಸೂಚನೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?