ಒಂದೇ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ವಿ: ಕಾರ್ನಾಡ್‍ರನ್ನ ನೆನೆದ ಪಾಪು

Public TV
1 Min Read
girish karnad Papu

ಹುಬ್ಬಳ್ಳಿ: ಕರ್ನಾಟಕ ವಿಶ್ವ ವಿಶ್ವವಿದ್ಯಾಲಯದಿಂದ ಒಂದೇ ವೇದಿಕೆಯಲ್ಲಿ ನನಗೆ ಹಾಗೂ ಗಿರೀಶ್ ಕಾರ್ನಾಡ್ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿತ್ತು ಎಂದು ಹಿರಿಯ ನಾಡೋಜ ಪಾಟೀಲ್ ಪುಟ್ಟಪ್ಪ ನೆನೆದಿದ್ದಾರೆ.

ನಗರದ ನಿವಾಸದಲ್ಲಿ ಮಾತನಾಡಿದ ಅವರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನದಿಂದ ಸಾಹಿತ್ಯ ಲೋಕಕ್ಕೆ ಬಹಳಷ್ಟು ನಷ್ಟವಾಗಿದೆ. ಕಾರ್ನಾಡ್ ಅವರು ನನ್ನಗಿಂತ 22 ವರ್ಷ ಚಿಕ್ಕವರು. ನಾಟಕ ಹಾಗೂ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದರು ಎಂದು ಸ್ಮರಿಸಿದರು.

Papu

ಗಿರೀಶ್ ಕಾರ್ನಾಡ್ ಅವರ ಧಾರವಾಡದ ನಿವಾಸಕ್ಕೆ ಒಂದು ಐತಿಹಾಸಿಕ ಇತ್ತು. ಆ ಮನೆಗೆ ಮಹಾತ್ಮಾ ಗಾಂಧಿಯವರು ಬಂದು ಹೋಗಿದ್ದರು. ಆದರೂ ಕಾರ್ನಾಡ್ ಆ ಮನೆಯನ್ನು ಮಾರಾಟ ಮಾಡಿದರು. ಆಗಾಗ ವಿದ್ಯಾವರ್ಧಕ ಸಂಘಕ್ಕೆ ಬರುತ್ತಿದ್ದ ಅವರು, ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *