ಜ್ವರಕ್ಕೆ ಅಂತಾ ಡಾಕ್ಟರ್ ಇಂಜೆಕ್ಷನ್ ಕೊಟ್ರು- ವ್ಯಕ್ತಿಯ ಇಡೀ ದೇಹದ ಚರ್ಮವೇ ಕಪ್ಪಾಯ್ತು!

Public TV
1 Min Read
MYS INJECTION

ಮೈಸೂರು: ಜ್ವರಕ್ಕೆ ಕೊಟ್ಟ ಇಂಜೆಕ್ಷನ್ ಅಡ್ಡಪರಿಣಾಮದಿಂದ ವ್ಯಕ್ತಿಯೊಬ್ಬನ ಚರ್ಮಕ್ಕೆ ಹಾನಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲೆಯ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸುರೇಶ್ ಎಂಬವರಿಗೆ ಇಂತಹ ಅನುಭವವಾಗಿದ್ದು, ಇದೀಗ ಅವರು ಆತಂಕಕ್ಕೆ ಒಳಗಾಗಿದ್ದಾರೆ.

ನಂಜನಗೂಡಿನ ಹೋಟೆಲೊಂದರಲ್ಲಿ ನೌಕರನಾಗಿರುವ ಸುರೇಶ್, ಕೆಲವು ದಿನಗಳ ಹಿಂದೆ ಜ್ವರಕ್ಕಾಗಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ.ಈ ವೇಳೆ ಅಲ್ಲಿನ ವೈದ್ಯರಾದ ಡಾ. ಚಿದಾನಂದ ಮೂರ್ತಿ, ಸುರೇಶ್ ಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಕೊಟ್ಟ ಸ್ವಲ್ಪ ಸಮಯಕ್ಕೆ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ಬಳಿಕ ಇಡೀ ದೇಹ ಆವರಿಸಿದೆ. ಯಾವುದೋ ಕಾಯಿಲೆ ಬಂದಿರಬಹುದೆಂದು ತಿಳಿದುಕೊಂಡು ಮಾನಸಿಕವಾಗಿ ಸುರೇಶ್ ಕುಗ್ಗಿದ್ದಾರೆ.

ಸುರೇಶ್ ಪರಿಸ್ಥಿತಿ ಗಮನಿಸಿದ ಹೋಟೆಲ್ ಮಾಲೀಕ ಮಂಜು ಕೂಡಲೇ ವೈದ್ಯ ಚಿದಾನಂದಮೂರ್ತಿ ಅವರನ್ನ ಸಂಪರ್ಕಿಸಿದಾಗ ತಾವು ಕೊಟ್ಟ ಇಂಜೆಕ್ಷನ್ ನಿಂದ ಅಡ್ಡ ಪರಿಣಾಮ ಆಗಿದೆ. ನಾನೇ ಸೂಕ್ತ ಚಿಕಿತ್ಸೆ ನೀಡುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದಾರೆ. ವೈದ್ಯರ ಎಡವಟ್ಟಿನಿಂದ ಸುರೇಶ್ ಗೆ ಇಲ್ಲವಾಗಿದ್ದ ಕಾಯಿಲೆ ಬಂದಿದ್ದು, ಮಾಡದ ತಪ್ಪಿಗೆ ಅಮಾಯಕ ಶಿಕ್ಷೆ ಅನುಭವಿಸುವಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *