ಮೈಸೂರು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ ರೋಗಿ ಸಾವು

Public TV
1 Min Read
ROGI

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಲ್ಲಿ ತಲೆತಗ್ಗಿಸುವ ಘನಘೋರ ಘಟನೆ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ.

MYS HOSPITAL 1

ಮೃತ ದುರ್ದೈವಿಯನ್ನು 45 ವರ್ಷದ ಶಂಕರ್ ಎಂದು ಗುರುತಿಸಲಾಗಿದೆ. ನಗರದ ಕೆ.ಆರ್. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ ಎರಡು ತಾಸು ಆಂಬುಲೆನ್ಸ್‍ನಲ್ಲೇ ಒದ್ದಾಡಿದ ರೋಗಿ ಕೊನೆಯುಸಿರೆಳೆದಿದ್ದಾರೆ.

MYS HOSPITAL 3

ಶಂಕರ್ ಅವರು ಎರಡು ದಿನಗಳ ಹಿಂದೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶಂಕರ್‍ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಣಕಾಸು ಸಮಸ್ಯೆಯ ಕಾರಣ ಕೆ.ಆರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಕೆ.ಆರ್. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದೆ ಆಂಬುಲೆನ್ಸ್‍ನಲ್ಲೇ ಶಂಕರ್ ನರಳಾಡಿದ್ದರು. ಈ ಹಿನ್ನೆಲೆಯಲ್ಲಿ ಶಂಕರ್‍ಗೆ ಮತ್ತೊಬ್ಬ ರೋಗಿಯ ವೆಂಟಿಲೇಟರ್ ತೆಗೆದು ಅಳವಡಿಸಲಾಗಿತ್ತು. ಆದ್ರೆ ಆ ಪ್ರಯತ್ನ ಫಲ ನೀಡಿಲ್ಲ.

MYS HOSPITAL 5

Share This Article
Leave a Comment

Leave a Reply

Your email address will not be published. Required fields are marked *