ಬೆಂಗಳೂರು: ಶನಿವಾರ ನಭೋಮಂಡಲದಲ್ಲಿ ಮತ್ತೊಂದು ಕೌತುಕ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಗುರುವಾರ ಮಧ್ಯಾಹ್ನ 1 ಗಂಟೆ 32 ನಿಮಿಷದಿಂದ ಸಂಜೆ 5 ಗಂಟೆ 02 ನಿಮಿಷದವರೆಗೆ ಸೂರ್ಯಗ್ರಹಣ ಘಟಿಸಲಿದೆ.
ಈ ಬಾರಿ ಜನರಿಗೆ ಯಾವುದೇ ಆತಂಕ ಇಲ್ಲ. ಯಾಕಂದ್ರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಗ್ರಹಣದ ಯಾವುದೇ ಆಚರಣೆಗಳನ್ನ ಪಾಲಿಸುವ ಅಗತ್ಯವೂ ಇಲ್ಲ. ಆದ್ರೆ ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಾತ್ರ ಪೂಜೆ ವೇಳೆಯಲ್ಲಿ ವ್ಯತ್ಯಯವಾಗಿದೆ. ಗ್ರಹಣದ ವೇಳೆ ಭಕ್ತರಿಗೆ ದೇವರ ದರ್ಶನ ಮಾತ್ರ ಸಿಗಲಿದ್ದು, ಪೂಜೆ, ನೈವೇದ್ಯ ಅರ್ಚನೆ ಇರಲ್ಲ. ಬೆಳಗ್ಗೆ 10 ಗಂಟೆಯೊಳಗೆ ಪೂಜೆ ನಡೆಯಲಿದೆ. ಅಮಾವಾಸ್ಯೆಯ ಜೊತೆಗೆ ಗ್ರಹಣ ಬಂದಿರೋದ್ರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮಧ್ಯಾಹ್ನ 1.32ಕ್ಕೆ ಗ್ರಹಣ ಸ್ಪರ್ಶಕಾಲ. ಮಧ್ಯಾಹ್ನ 3.16 ಗ್ರಹಣ ಮಧ್ಯಕಾಲ. ಸೂರ್ಯ ಗ್ರಹಣದ ಮೋಕ್ಷ ಕಾಲ ಸಂಜೆ 5 ಗಂಟೆ. ಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ, ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಯಾವುದೇ ಗೊಂದಲ ಬೇಡ ಅಂತ ಕಾಡುಮಲ್ಲೇಶ್ವರ ದೇಗುಲದ ಅರ್ಚಕರಾದ ಗಂಗಾಧರ್ ಹೇಳಿದ್ದಾರೆ.