Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು

Chikkaballapur

ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು

Public TV
Last updated: September 27, 2021 3:16 pm
Public TV
Share
4 Min Read
muder chikkabalapura w
SHARE

ಚಿಕ್ಕಬಳ್ಳಾಪುರ: ಹೆತ್ತ ತಂದೆ,ತಾಯಿ ಹಾಗೂ ದೊಡ್ಡಪ್ಪ ಸೇರಿ ಮಗಳನ್ನು ಕೊಲೆ ಮಾಡಿದ್ದು, ಪೊಲೀಸರ ತನಿಖೆಯಲ್ಲಿ ಮರ್ಯಾದಾ ಹತ್ಯಾ ಪ್ರಕರಣ ಬಯಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Contents
  • ಕೊಲೆ ಯಾಕೆ?
  • ಮೃತದೇಹವನ್ನ ಬಾವಿಯಲ್ಲಿ ಬಿಸಾಡಿದರು!
  • ಆತ್ಮಹತ್ಯೆ ಎಂದೇ ಭಾವಿಸಿದ್ದ ಪೊಲೀಸರು!
  • ಪೊಲೀಸರಿಗೆ ಎಸ್‍ಪಿ ಪ್ರಶಂಸೆ!

ಹೆತ್ತ ತಂದೆ, ತಾಯಿ ಮತ್ತು ದೊಡ್ಡಪ್ಪನಿಂದಲೇ ಹತಳಾದ ದುರ್ದೈವಿಯ ಹೆಸರು ಪರ್ವಿನಾ ಬಾನು. ಆಕೆಯ ತಾಯಿ ಗುಲ್ಜಾರ್, ತಂದೆ ಫಯಾಜ್ ಹಾಗೂ ದೊಡ್ಡಪ್ಪ ಪ್ಯಾರೇಜಾನ್ ಕೊಲೆ ಮಾಡಿದವರು. ಈ ಮೂವರನ್ನು ಬಂಧಿಸಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸರು ವಿಚಾರಣೆ ಮುಂದುವರೆಸಿ ತನಿಖೆ ಕೈಗೊಂಡಿದ್ದಾರೆ.

chikkabalapura murder 1

ಕೊಲೆ ಯಾಕೆ?

ಫಯಾಜ್ ಹಾಗೂ ಗುಲ್ಜಾರ್ ಮಗಳಾದ ಪರ್ವಿನಾ ಬಾನುವಿಗೆ 10 ವರ್ಷಗಳ ಹಿಂದೆ ತಮ್ಮದೇ ಸಮುದಾಯದ ಯುವಕನ ಜೊತೆ ಮದುವೆ ಮಾಡಿದ್ದರು. ಆದರೆ ಮದುವೆ ಮೊದಲ ದಿನವೇ ಗಂಡನನ್ನು ತೊರೆದು ಬಂದ ಪರ್ವಿನಾ ಬಾನು ಅನ್ಯ ಧರ್ಮದ ಪ್ರಿಯಕರ ಮಣಿವಾಲ ಗ್ರಾಮದ ಶಿವಪ್ಪ ಎಂಬಾತನ ಜೊತೆ ಸಂಸಾರ ಸಾಗಿಸುತ್ತಿದ್ದಳು. ಇದನ್ನೂ ಓದಿ: ಪ್ರತಿಭಟನೆ ನಡೆದರೂ ಚಿಕ್ಕಬಳ್ಳಾಪುರದಲ್ಲಿ KSRTC ಬಸ್ಸುಗಳಿಗೆ ಇಲ್ಲ ಬಂದ್’

chikkabalapura murder

ಶಿಲ್ಪಾ ಎಂದು ಮರುನಾಮಕರಣವನ್ನು ಸಹ ಮಾಡಿಕೊಂಡಿದ್ದರು. ಇವರಿಬ್ಬರ ಸುಖ ದಾಂಪತ್ಯ ಎಂಬಂತೆ ಗಂಡು ಮಗು ಸಹ ಆಗಿತ್ತು. ಆದರೆ ಅನಾರೋಗ್ಯದ ಕಾರಣ ಶಿವಪ್ಪ ತೀರಿಕೊಂಡ ನಂತರ ಮಣಿವಾಲ ತೊರೆದ ಪರ್ವಿನಾ ಬಾನು ಆಲಿಯಾಸ್ ಶಿಲ್ಪಾ ಮುಸಲ್ಮಾನರಹಳ್ಳಿಗೆ ಬಂದು ನೆಲೆಸಿದ್ದಳು. ಗಾರ್ಮೆಂಟ್ಸ್ ಕೆಲಸಕ್ಕೆ ಎಂದು ಹೋಗುತ್ತಿದ್ದ ಈಕೆ ವಾಟದಹೊಸಹಳ್ಳಿಯ ವಿನಯ್ ಜೊತೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಬೆಳೆಸಿಕೊಂಡಿದ್ದಳು.

ಈ ವಿನಯ್ ಸಹ ಅಚಾನಾಕ್ಕಾಗಿ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಡುತ್ತಾನೆ. ಇದರಿಂದ ಈಕೆಯ ಜೊತೆ ಸಂಬಂಧ ಬೆಳೆಸಿದವರೆಲ್ಲಾ ಸಾಯುತ್ತಾರೆ ಎಂದು ಈಕೆಯ ಪರಿಚಯಸ್ಥರು ಎಲ್ಲರೂ ಮಾತನಾಡಿಕೊಂಡು ಅನುಮಾನಿಸಲು ಶುರು ಮಾಡಿದ್ರು. ಇದರಿಂದ ನೊಂದಿದ್ದ ಪರ್ವಿನಾ ಬಾನು ಸೆ.04 ರಂದು ತನ್ನ ತಂದೆ, ತಾಯಿ ಹಾಗೂ ದೊಡ್ಡಪ್ಪ ಕೆಲಸ ಮಾಡ್ತಿದ್ದ ಶ್ರೀನಿವಾಸಚಾರ್ಲಹಳ್ಳಿಯ ಮಾವಿನ ತೋಟಕ್ಕೆ ಹೋಗಿದ್ದಾಳೆ. ಇದನ್ನೂ ಓದಿ:  ಹೊಸ ಸಂಸತ್ ಭವನ ನಿರ್ಮಾಣದ ಸ್ಥಳಕ್ಕೆ ರಾತ್ರಿ ದಿಢೀರ್ ಭೇಟಿ ಕೊಟ್ಟ ಮೋದಿ

ಈ ವೇಳೆ ತಾಯಿ ಗುಲ್ಜಾರ್ ಹಾಗೂ ದೊಡ್ಡಪ್ಪನಾದ ಪ್ಯಾರೇಜಾನ್ ಜೊತೆ ಅಕ್ರಮ ಸಂಬಂಧ ಹೊಂದಿರೋ ವಿಷಯ ತಿಳಿದುಕೊಂಡಿದ್ದಾಳೆ. ಈ ವೇಳೆ ಇವಳು ಇದ್ರೆ ನಮ್ಮ ಸಂಬಂಧಕ್ಕೂ ಅಡ್ಡಿ ಹಾಗೂ ಮೊದಲೇ ನಮ್ಮ ಸಮುದಾಯ ಬಿಟ್ಟು ಬೇರೆ ಸಮುದಾಯದವನ ಜೊತೆ ಹೋಗಿ ಈಗ ಬಂದಿದ್ದಾಳೆ ಎಂದು ಗಲಾಟೆ ಮಾಡಿ ಪರ್ವಿನಾ ಬಾನು ಧರಿಸಿದ್ದ ಜಾಕೆಟ್ ನ ದಾರದಿಂದಲೇ ಕುತ್ತಿಗೆ ಬಿಗಿದು ಆಕೆಯ ಕೊಲೆ ಮಾಡಿದ್ದಾರೆ.

ಮೃತದೇಹವನ್ನ ಬಾವಿಯಲ್ಲಿ ಬಿಸಾಡಿದರು!

ತದನಂತರ ಬಂದ ತಂದೆಗೂ ವಿಷಯ ತಿಳಿಸಿ ಮೂವರು ಸೇರಿ ಗಾಡಿಯಲ್ಲಿ ಮೃತದೇಹವನ್ನ ರಾತ್ರಿ ವೇಳೆ ತೆಗೆದುಕೊಂಡು ಹೋಗಿ ವಾಟದಹೊಸಹಳ್ಳಿ ಬಳಿಯ ಬಾವಿಯಲ್ಲಿ ಬಿಸಾಡಿದ್ದಾರೆ. ಇದು ಆತ್ಮಹತ್ಯೆ ಎಂದು ಬಿಂಬಿಸೋಕೆ ಬಾವಿಗೆ ಹೊಂದಿಕೊಂಡ ಕೊಂಬೆ ಕಟಾವು ಮಾಡಿ ಮೃತದೇಹದ ಮೇಲೆ ಬಿಸಾಡಿ ಬಂದಿದ್ದರು.

chikkabalapura murder 2 1

ಯಾರಿಗೂ ಗೊತ್ತಾಗಲ್ಲ ಎಂದು ತಮ್ಮ ಪಾಡಿಗೆ ತಾವಿದ್ದರು. ಇನ್ನೂ ಸ್ಥಳೀಯರ ಮಾಹಿತಿ ಮೇರೆಗೆ ಸೆ.05 ರಂದು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಾವಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿ ತಂದೆ ತಾಯಿಗೆ ಮೃತದೇಹ ತಗೊಂಡು ಹೋಗುವಂತೆ ಹೇಳಿದ್ರು. ಆದರೆ ಆಕೆಯ ಪೋಷಕರು ಮೃತದೇಹ ತೆಗೆದುಕೊಂಡು ಹೋಗಲಿಲ್ಲ. ಪೊಲೀಸರ ಅನಾಥ ಶವ ಎಂದು ಅಂತ್ಯಸಂಸ್ಕಾರ ಕಾರ್ಯ ನೇರವೇರಿಸಿದ್ದರು. ಇದನ್ನೂ ಓದಿ: ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ ವಂಚನೆ – ಐವರು ಅರೆಸ್ಟ್

ಪರ್ವಿನಾ ಬಾನು ಗಂಡ ಹಾಗೂ ಪ್ರಿಯಕರನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ರು. ಇನ್ನೂ ಪರ್ವಿನಾ ವಾಸವಿದ್ದ ಮನೆಯಲ್ಲಿ ಐ ಮಿಸ್ ಯೂ ವಿಜೆ ನಾನು ನಿನ್ನ ಹತ್ರ ಬರ್ತೀದ್ದೀನಿ ಅನ್ನೋ ಬರಹ ಕೂಡ ಇತ್ತು. ಇದ್ರಿಂದ ಗಂಡ ಪ್ರಿಯಕರನ ಸಾವುಗಳಿಂದ ನೊಂದಿದ್ದ ಪರ್ವಿನಾ ಆತ್ಮಹತ್ಯೆ ಅಂತಲೇ ಎಲ್ಲರೂ ಅಂದುಕೊಂಡಿದ್ರು.

ಆತ್ಮಹತ್ಯೆ ಎಂದೇ ಭಾವಿಸಿದ್ದ ಪೊಲೀಸರು!

ಪರ್ವಿನಾ ಬಾನು ಬಾವಿಯಲ್ಲಿ ಬಿದ್ದ ಜಾಗ ಹಾಗೂ ಆಕೆಯ ಕುತ್ತಿಗೆ ಬಿಗಿದಿದ್ದ ಮಾರ್ಕ್ ಹಾಗೂ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ರೆ ಕೊಂಬೆ ಮುರಿದು ಬಾವಿಯಲ್ಲಿ ಬಿದ್ದಿರುವ ರೀತಿ ಅದು ಕಾಣಿಸುತ್ತಿರಲಿಲ್ಲ. ಕೊಂಬೆಯನ್ನ ಯಾರೂ ಮಚ್ಚಿನಲ್ಲಿ ಕಟಾವು ಮಾಡಿದ ಹಾಗೆ ಇತ್ತು. ಕಟಾವು ಮಾಡಿದ್ದು ಯಾರು? ಕುತ್ತಿಗೆಗೆ ಬಿಗಿದುಕೊಂಡಿದ್ರೆ ದಾರ ಎಲ್ಲಿ ಹೋಯ್ತು? ಎಂಬ ಅನುಮಾನಗಳು ಮೂಡಿ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಅನುಮಾನ ಸಿಪಿಐ ಶಶಿಧರ್ ಅವರಿಗೆ ಮೂಡಿತ್ತು. ಹೀಗಾಗಿ ಘಟನೆಯನ್ನು ಆಳವಾಗಿ ತನಿಖೆ ಕೈಗೊಂಡ ಪೊಲೀಸರಿಗೆ ತಂದೆ, ತಾಯಿ ಹಾಗೂ ಅಕೆಯ ದೊಡ್ಡಪ್ಪನೇ ಈ ಕೊಲಗಾರರು ಎಂದು ಗೊತ್ತಾಗಿದೆ. ಸದ್ಯ ಮೂವರು ಆರೋಪಿಗಳು ಪೊಲೀಸರ ಅತಿಥಿಗಳಾಗಿ ಜೈಲು ಸೇರುವಂತಾಗಿದೆ. ಇದನ್ನೂ ಓದಿ: ಸಿಎಂ ಜಿಲ್ಲೆಯಲ್ಲಿ ಮರಳು ಸಾಗಾಣಿಕೆಗೆ ಮಕ್ಕಳ ಬಳಕೆ – ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ

ಪೊಲೀಸರಿಗೆ ಎಸ್‍ಪಿ ಪ್ರಶಂಸೆ!

ಆರಂಭದಲ್ಲಿ ಆತ್ಮಹತ್ಯೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಇಲ್ಲ ಇದು ಕೊಲೆ ಇರಬಹುದು ಎಂದು ಅನುಮಾನದ ಮೇರೆಗೆ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಬಿಯಾದ ಸಿಪಿಐ ಶಶಿಧರ್ ಹಾಗೂ ಪಿ.ಎಸ್.ಐ ವಿಜಯ್ ಕುಮಾರ್ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ಎಸ್‍ಪಿ ಮಿಥುನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

TAGGED:chikkaballapurMurderPublic TVಕೊಲೆಚಿಕ್ಕಬಳ್ಳಾಪುರಪಬ್ಲಿಕ್ ಟಿವಿಮರ್ಯಾದಾ ಹತ್ಯಾ
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

ICC Mens T20 World Cup ind vs Namibia Jasprit Bumrahs stunning catch Axar Patel shocked
Cricket

ಬುಮ್ರಾ ಸ್ಟನ್ನಿಂಗ್‌ ಕ್ಯಾಚ್‌ – ಅಕ್ಷರ್‌ ಪಟೇಲ್‌ ಶಾಕ್‌!

Public TV
By Public TV
2 hours ago
kids died accident
Districts

ಶಾಲಾ ಬಸ್ ಹರಿದು ಮಕ್ಕಳು ಸಾವು – ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ

Public TV
By Public TV
3 hours ago
Ishan Kishan Hardik Pandya
Cricket

ಕಿಶನ್‌ ದಾಖಲೆಯ ಫಿಫ್ಟಿ, ಪಾಂಡ್ಯ ಆಲ್‌ರೌಂಡರ್‌ ಆಟ – ನಮೀಬಿಯಾ ವಿರುದ್ಧ 93 ರನ್‌ಗಳ ಭರ್ಜರಿ ಜಯ

Public TV
By Public TV
3 hours ago
01 6
Big Bulletin

ಬಿಗ್‌ ಬುಲೆಟಿನ್‌ 12 February 2026 ಭಾಗ-1

Public TV
By Public TV
3 hours ago
02 7
Big Bulletin

ಬಿಗ್‌ ಬುಲೆಟಿನ್‌ 12 February 2026 ಭಾಗ-2

Public TV
By Public TV
3 hours ago
03 6
Big Bulletin

ಬಿಗ್‌ ಬುಲೆಟಿನ್‌ 12 February 2026 ಭಾಗ-3

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?