ದಾವಣಗೆರೆ: 7 ವರ್ಷದ ಬಾಲಕಿ ಪ್ರಾರ್ಥನಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನಂದಿನಿ ಸೀರಿಯಲ್ ನೋಡಿ ಅದೇ ರೀತಿ ನಟನೆ ಮಾಡಲು ಹೋಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ನೊಂದ ಪೋಷಕರು ಟಿವಿಯನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 11 ನೇ ತಾರೀಖಿನಂದು ನಡೆದ ಘಟನೆಯಿಂದ ಅಘಾತ ಉಂಟಾಗಿರುವ ಮಗುವಿನ ಪೋಷಕರು ಟಿವಿಯ ಮೇಲೆ ತಮ್ಮ ಆಕ್ರೋಶ ತೋರಿಸಿದ್ದಾರೆ. ನಗು ನಗುತ್ತಾ ಮನೆಯ ತುಂಬಾ ಓಡಾಡುತ್ತಿದ್ದ ಮಗು ಈಗ ಕಾಣದ ಲೋಕಕ್ಕೆ ಹೋಗಿದೆ. ಇದೆಕ್ಕೆಲ್ಲ ಕಾರಣ ಈ ಟಿವಿ, ಇದರಿಂದಲೇ ನಮ್ಮ ಮಗು ಸಾವನ್ನಪ್ಪಿದೆ ಎಂದು ಪ್ರಾರ್ಥನಾ ತಂದೆ ಮಂಜುನಾಥ್ ಕಲ್ಲಿನಿಂದ ಒಡೆದು ಹಾಕಿದ್ದಾರೆ.
ಅಲ್ಲದೇ ಧಾರಾವಾಹಿಯ ನಿರ್ದೇಶಕರ ಮೇಲೆ ಹಾಗೂ ಸಂಬಂಧಪಟ್ಟವರ ಮೇಲೆ ದೂರು ನೀಡಲು ಹಲವು ಮುಖಂಡರು ಹೇಳಿದ್ದರು. ಆದ್ರೆ ಮಗುವಿನ ಪೋಷಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಕೂಲಿ ಮಾಡಿ ಜೀವನ ಮಾಡುವ ನಮಗೆ ಕೋರ್ಟು ಕಚೇರಿ ಎಂದು ಓಡಾಡಲು ಆಗುವುದಿಲ್ಲ. ಇರೋ ಇಬ್ಬರು ಮಕ್ಕಳನ್ನು ಹುಷಾರಾಗಿ ಸಾಕುತ್ತೇವೆ ಎಂದು ಪೋಷಕರು ಹೇಳುತ್ತಿದ್ದಾರೆ.
https://youtu.be/ukbXoVNhqR8