ಗ್ರಾಮ ಪಂಚಾಯ್ತಿ ಅಧ್ಯಕ್ಷರ ಚುನಾವಣೆ ವೇಳೆ ಸದಸ್ಯನೇ ಅಪಹರಣ

Public TV
1 Min Read
TMK KIDNAP

ತುಮಕೂರು: ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಸದಸ್ಯರನ್ನೇ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಹುತ್ರಿದುರ್ಗದಲ್ಲಿ ನಡೆದಿದೆ.

ಕಾಂಗ್ರೆಸ್ ಸದಸ್ಯ ಶಿವಾನಂದ್ (40) ಕಳೆದ ಐದು ದಿನದಿಂದ ಕಣ್ಮರೆಯಾಗಿದ್ದಾರೆ. ಇಂದು ಅಧ್ಯಕ್ಷ ಚುನಾವಣೆ ನಡೆಯಬೇಕಿದ್ದು, ಉದ್ದೇಶ ಪೂರ್ವಕವಾಗಿಯೇ ಶಿವಾನಂದ್ ಅವರನ್ನು ಅಪಹರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

vlcsnap 2017 11 15 13h49m02s14

ಶಿವಾನಂದ್ ಕಣ್ಮರೆಯಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಅಧ್ಯಕ್ಷ ಚುನಾವಣೆಯನ್ನು ಕುಣಿಗಲ್ ತಹಶೀಲ್ದಾರ್ ನಾಗರಾಜು ಅವರು ಮುಂದೂಡಿದ್ದಾರೆ. ಆದರೆ ಇದರಿಂದ ಆಕ್ರೋಶಗೊಂಡ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಇಂದು ಚುನಾವಣೆ ನಡೆಸಬೇಕೆಂದು ಪಟ್ಟು ಹಿಡಿದಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಗಲಾಟೆಯಾಗುವ ಸನ್ನಿವೇಶ ನಿರ್ಮಾಣವಾಗಿತ್ತು.

ಅಷ್ಟೇ ಅಲ್ಲದೇ ಚುನಾವಣೆ ನಡೆಸುವಂತೆ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ತಹಶೀಲ್ದಾರ್ ಅವರನ್ನು ತಡೆದಿದ್ದಾರೆ. ಆದರೆ ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

vlcsnap 2017 11 15 13h48m58s174

vlcsnap 2017 11 15 13h49m12s99

vlcsnap 2017 11 15 13h49m21s174

vlcsnap 2017 11 15 13h49m40s130

vlcsnap 2017 11 15 13h49m47s188

vlcsnap 2017 11 15 13h50m01s83

vlcsnap 2017 11 15 13h50m14s200

vlcsnap 2017 11 15 13h50m30s121

vlcsnap 2017 11 15 13h50m38s185

vlcsnap 2017 11 15 13h50m50s56

vlcsnap 2017 11 15 13h50m56s121

vlcsnap 2017 11 15 13h51m45s71

vlcsnap 2017 11 15 13h52m14s128

vlcsnap 2017 11 15 13h52m25s239

vlcsnap 2017 11 15 13h52m54s18

vlcsnap 2017 11 15 13h53m05s130

vlcsnap 2017 11 15 13h53m18s2

Share This Article
Leave a Comment

Leave a Reply

Your email address will not be published. Required fields are marked *