– 2017ರಲ್ಲಿ ಭಾರತದ ಪ್ರವೇಶಿಸಿದ್ದ
ಶ್ರೀನಗರ: ಜಮ್ಮು-ಕಾಶ್ಮೀರದ ಭದ್ರತಾ ಪಡೆ ಪಾಕಿಸ್ತಾನದ ಉಗ್ರನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ಮಾತನಾಡಿದ ಬಾರಾಮುಲ್ಲಾ ಎಸ್ಎಸ್ಪಿ ಅಬ್ದುಲ್ ಕಾಯೂಮ್, ಬಂಧಿತ ಪಾಕಿಸ್ತಾನದ ಉಗ್ರನ ಹೆಸರು ಮೊಹಮ್ಮದ್ ವಕಾರ್. ಬಂಧಿತ ಉಗ್ರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾವಾಲಿಯ ನಿವಾಸಿಯಾಗಿದ್ದು, 2017ರಲ್ಲಿ ಭಾರತದ ಗಡಿಯನ್ನು ಪ್ರವೇಶಿಸಿದ್ದ. ಕಳೆದ ಒಂದು ವರ್ಷದಿಂದ ಮೊಹಮ್ಮದ್ ವಕಾರ್ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನು ಎಂದು ತಿಳಿಸಿದರು.
SSP Baramulla, Abdul Qayoom: His name is Mohammad Waqar, a resident of Mohalla Miana, Mianwali, Punjab, Pakistan. He came here in July 2017 by crossing the border, he was operating in Srinagar for over a year. His plan was to resurrect militancy in Baramulla. pic.twitter.com/BWUEkdQj50
— ANI (@ANI) April 24, 2019
ಒಂದು ವರ್ಷದಿಂದ ಶ್ರೀನಗರದಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ವಕಾರ್, ಬಾರಾಮುಲ್ಲಾ ಪ್ರದೇಶದ ಯುವಕರನ್ನು ಸಂಘಟನೆಯತ್ತ ಸೆಳೆಯುವ ಮೂಲಕ ಉಗ್ರವಾದ ಜೀವಂತವಾಗಿರುವಂತೆ ಪ್ರಯತ್ನಿಸುತ್ತಿದ್ದನು. ಇತ್ತೀಚಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವಕರು ಉಗ್ರ ಸಂಘಟನೆಗೆ ಸೇರಲು ಹಿಂದೇಟು ಹಾಕುತ್ತಿದ್ದರಿಂದ ವಕಾರ್ ಭಾರತ ಪ್ರವೇಶಿಸಿದ್ದ ಎಂದು ವರದಿಯಾಗಿದೆ.
ಉಗ್ರ ಸಂಘಟನೆಯಲ್ಲಿ ಸೇರಲು ಸ್ಥಳೀಯ ಯುವಕರು ಹಿಂದೇಟು ಹಾಕುತ್ತಿದ್ದು, ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ದೇಶದ ರಕ್ಷಣೆಯ ವಿಷಯದಲ್ಲಿ ಸಂತೋಷದ ಸುದ್ದಿಯಾಗಿದೆ. 2018ರಲ್ಲಿ ಪೊಲೀಸರು 272 ಉಗ್ರರನ್ನು ಹೊಡೆದುರುಳಿಸಿದ್ದರು. ಹಾಗೆಯೇ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಸೆರೆ ಹಿಡಿಯಲಾಗಿತ್ತು ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಪುಲ್ವಾಮಾ ದಾಳಿ ಬಳಿಕ 41 ಉಗ್ರರ ಎನ್ಕೌಂಟರ್: ಭಾರತೀಯ ಸೇನೆhttps://t.co/b8gQh8uolL#PulwamaAttack #IndianArmy #JammuAndKashmir
— PublicTV (@publictvnews) April 24, 2019