ಬಾಲಕೋಟ್ ಏರ್‌ಸ್ಟ್ರೈಕ್ ಬಳಿಕ ಪಾಕ್ ಎಂದಿಗೂ ಎಲ್‍ಓಸಿ ದಾಟಿಲ್ಲ: ಏರ್‌ಚೀಫ್‌ ಮಾರ್ಷಲ್

Public TV
2 Min Read
air chief marshal bs dhanoa

ನವದೆಹಲಿ: ಬಾಲಕೋಟ್ ಮೇಲೆ ಏರ್‌ಸ್ಟ್ರೈಕ್ ನಡೆಸಿದ ಬಳಿಕ ಪಾಕಿಸ್ತಾನ ಎಂದಿಗೂ ಭಾರತದ ಗಡಿ ನಿಯಂತ್ರಣಾ ರೇಖೆಯನ್ನು ದಾಟಿಲ್ಲ ಎಂದು ಐಎಎಫ್ ಮುಖ್ಯಸ್ಥ ಬಿರೇಂದ್ರ ಸಿಂಗ್ ಧನೋವಾ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಮುಚ್ಚಿರುವುದು ನೆರೆಯ ದೇಶಗಳಿಗೆ ತೊಂದರೆಯಾಗಿದೆಯೇ ಹೊರೆತು ಭಾರತಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಪಾಕಿಸ್ತಾನ ಹಾಗೂ ಭಾರತ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಆದರೆ ಪಾಕ್‍ನ ಈ ನಿರ್ಣಯ ದೇಶದ ಒಳಗಡೆ ಇರುವ ನಾಗರಿಕಾ ವಿಮಾನಯಾನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದರು.

Air surgical strike 2

ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಐಎಎಫ್ ಪಾಕಿಸ್ತಾನದ ಬಾಲಕೋಟ್ ಪ್ರದೇಶದಲ್ಲಿರುವ ಜೈಶ್ ಉಗ್ರರ ಅಡಗು ತಾಣದ ಮೇಲೆ ಏರ್‌ಸ್ಟ್ರೈಕ್ ಮಾಡಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಾಕ್ ಗಡಿ ನಿಯಂತ್ರಣ ರೇಖೆ ದಾಟಿ ಬಂದಿತ್ತು. ಆದರೆ ಉತ್ತರ ಕೊಡುವಲ್ಲಿ ವಿಫಲವಾಯ್ತು. ಭಾರತ ತನ್ನ ಕಾರ್ಯಾಚರಣೆಯಲ್ಲಿ ವಿಫಲವಾಗಿಲ್ಲ. ಹೀಗಾಗಿ ಏರ್‌ಸ್ಟ್ರೈಕ್ ಬಳಿಕ ಪಾಕಿಸ್ತಾನ ಎಂದಿಗೂ ಗಡಿ ನಿಯಂತ್ರಣಾ ರೇಖೆ ದಾಟಿ ಬಂದಿಲ್ಲ ಎಂದು ಐಎಎಫ್ ಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಂಡರು.

Air surgical strike 1

ಪಾಕ್ ನಮ್ಮ ವಾಯು ನೆಲೆಯ ಮೇಲೆ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ನಮ್ಮ ಸೈನ್ಯದ ಕಾರ್ಯವೈಕರಿ. ನಾವು ಬಾಲಕೋಟ್‍ನಲ್ಲಿ ಏರ್‌ಸ್ಟ್ರೈಕ್ ಮಾಡಲು ಕಾರ್ಯಾಚರಣೆ ನಡೆಸಿದೆವು. ಅದನ್ನು ಸಾಧಿಸಿ ತೋರಿಸಿದೆವು. ಹಾಗೆಯೇ ಪಾಕಿಸ್ತಾನ ಕೂಡ ನಮ್ಮ ಸೈನ್ಯದ ಮೇಲೆ ದಾಳಿ ನಡೆಸಲು ಬಂದಿತ್ತು. ಆದರೆ ಅವರಿಂದ ಅದು ಸಾಧ್ಯವಾಗಿಲ್ಲ. ಹೇಗೆ ಕಾರ್ಯಾಚರಣೆ ನಡೆಸಿದ್ದೇವೆ? ಎಷ್ಟು ಜೆಟ್ ಉಪಯೋಗಿಸಿದ್ದೇವೆ ಎನ್ನುವುದಕ್ಕಿಂತ ನೀವು ನಿಮ್ಮ ಸೈನ್ಯದ ಗುರಿಯನ್ನು ತಲುಪಿದ್ದೀರಾ ಎನ್ನುವುದೇ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ನಾವು ನಿರೀಕ್ಷಿತ ಸಾಧನೆ ಮಾಡಿದ್ದೇವೆ ಎಂದರು.

miraj 2

ಈ ವೇಳೆ ಕಾರ್ಗಿಲ್ ಯುದ್ಧವಾಗಿ 20 ವರ್ಷ ಕಳೆದಿರುವ ಬಗ್ಗೆ ಮಾತನಾಡಿ, ಈವೆರೆಗೆ ಭಾರತ ನಡೆಸಿದ ಎಲ್ಲಾ ದಾಳಿಯಲ್ಲೂ ನಾವು ನಮ್ಮ ಸಂಕಲ್ಪ ಹಾಗೂ ಸಾಮರ್ಥ್ಯವನ್ನು ತೋರಿಸಿದ್ದೇವೆ ಎಂದು ತಿಳಿಸಿದರು.

ಭಾರತ ವಾಯು ಮಾರ್ಗ ಮುಚ್ಚುವ ಬಗ್ಗೆ ಪ್ರಶ್ನಿಸಿದಾಗ, ನಾವು ಫೆ.27ರಂದು ಶ್ರೀನಗರದ ವಾಯು ಮಾರ್ಗವನ್ನು ಮುಚ್ಚಿದ್ದೆವು. ಅದು ಕೇವಲ 2ರಿಂದ 3 ಗಂಟೆಗಳ ಕಾಲ ಮಾತ್ರ ಅಷ್ಟೇ ಎಂದು ಹೇಳಿದರು.

India Pakistan

ಪಾಕಿಸ್ತಾನದ ಜೊತೆ ಇರುವ ಉದ್ವಿಗ್ನ ಸ್ಥಿತಿಯಿಂದ ಭಾರತದ ವಿಮಾನಯಾನಕ್ಕೆ ಯಾವುದೇ ತೊಂದರೆಯಾಗಿಲ್ಲ. ಯಾಕೆಂದರೆ ನಮ್ಮ ಆರ್ಥಿಕತೆ ಅವರಿಗಿಂತ ಬಹಳ ದೊಡ್ಡದು. ಪಾಕಿಸ್ತಾನ ಅವರ ವಾಯು ಮಾರ್ಗವನ್ನು ಮುಚ್ಚಿದ್ದಾರೆ ಎಂದರೆ ಅದು ಅವರ ಸಮಸ್ಯೆ. ಆದರೆ ನಮ್ಮ ಆರ್ಥಿಕತೆಯಲ್ಲಿ ವಾಯು ಸಂಚಾರವು ಮುಖ್ಯ ಭಾಗವಾಗಿದೆ. ಹೀಗಾಗಿ ವಾಯುಪಡೆ ಕೂಡ ಎಂದಿಗೂ ನಾಗರಿಕ ವಿಮಾನಗಳನ್ನು ತಡೆಯುವುದಿಲ್ಲ ಎಂದು ಉತ್ತರಿಸಿದರು.

Share This Article
Leave a Comment

Leave a Reply

Your email address will not be published. Required fields are marked *