ಬೆಳಗಾವಿ: ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಹಿನ್ನೆಲೆಯಲ್ಲಿ ಬೆಳಗಾವಿಯ ರಾಮದುರ್ಗದ ವ್ಯಕ್ತಿ ಓರ್ವ ತನ್ನ ಫೇಸ್ಬುಕ್ನಲ್ಲಿ ದೇಶದ್ರೋಹಿ ಪೋಸ್ಟ್ ಮಾಡಿದ್ದಾನೆ.
ಎಂ.ಡಿ.ಶಫಿ ದೇಶದ್ರೋಹಿ ಪೋಸ್ಟ್ ಮಾಡಿದಾತ. ಈತ ರಾಮದುರ್ಗ ಮಾಜಿ ಶಾಸಕ, ಕಾಂಗ್ರೆಸ್ನ ಅಶೋಕ್ ಪಟ್ಟಣ ಅವರ ಬಲಗೈ ಬಂಟನಾಗಿದ್ದಾನೆ. ಶಫಿ ತನ್ನ ಫೇಸ್ಬುಕ್ ಖಾತೆಯಲ್ಲಿ “ಜೈ ಪಾಕಿಸ್ತಾನ, ಹಮಾರ ಜೈ” ಎಂದು ಪೋಸ್ಟ್ ಮಾಡಿದ್ದಾನೆ.
ಶಫಿ ಮಾಡಿದ್ದ ದೇಶದ್ರೋಹಿ ಪೋಸ್ಟ್ ಕಂಡ ಜನರು ಆಕ್ರೋಶಗೊಂಡಿದ್ದು, ನೇರವಾಗಿ ರಾಮದುರ್ಗ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ದೇಶದ್ರೋಹಿ ಪೋಸ್ಟ್ ಹಾಕಿದ್ದ ಶಫಿಯನ್ನು ಬಂಧಿಸುವಂತೆ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಜನರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭ ಸ್ವಲ್ಪ ಸಮಯದವರೆಗೂ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪುಲ್ವಾಮಾದಲ್ಲಿ ನಡೆದ ದಾಳಿ ಹಾಗೂ ಭಾರತದ ವಾಯುಸೇನೆ ಉಗ್ರರ ವಿರುದ್ಧ ವೈಮಾನಿಕ ದಾಳಿ ಮಾಡಿದ ನಂತರ ಕರ್ನಾಟಕದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಅನೇಕ ಮಂದಿ ಜೈಕಾರ ಹಾಕುತ್ತಿದ್ದಾರೆ. ಅಂತಹವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv