ಇಸ್ಲಾಮಾಬಾದ್: ಮೋಟಾರ್ ಬೈಕ್ನಲ್ಲಿ ಬಂದ ವ್ಯಕ್ತಿಯ ಆತ್ಮಾಹುತಿ ಬಾಂಬ್ ದಾಳಿಗೆ ಮೂವರು ಮೃತಪಟ್ಟು, 20 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಾಕಿಸ್ತಾನದ ಕ್ವೆಟ್ಟಾದಲ್ಲಿ ನಡೆದಿದೆ.
ಬೈಕ್ನಲ್ಲಿ ಬಂದ ಸೂಸೈಡ್ ಬಾಂಬರ್ ಚೆಕ್ಪೋಸ್ಟ್ ಬಳಿ ಕಾನೂನು ಜಾರಿ ಸಂಸ್ಥೆಗೆ ಸೇರಿದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ದಾಳಿಯಲ್ಲಿ ಮೃತಪಟ್ಟ ಮೂರೂ ಮಂದಿ ಈ ಪ್ಯಾರಾಮಿಲಿಟರಿ ಸಿಬ್ಬಂದಿಯೇ ಆಗಿದ್ದಾರೆ. ಐಟಿಪಿ ನಡೆಸಿದ ಈ ಸೂಸೈಡ್ ಬಾಂಬ್ ದಾಳಿಯನ್ನು ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿದ್ದಾರೆ. ದಾಳಿಯಲ್ಲಿ ಹುತಾತ್ಮರಾದವರ ಕುಟುಂಬಕ್ಕೆ ಸಾಂತ್ವನಗಳು ಹಾಗೂ ಗಾಯಗೊಂಡವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ವಿದೇಶಿ ಬೆಂಬಲಿತ ಉಗ್ರರಿಂದ ನಮ್ಮನ್ನು ಸದಾಕಾಲ ಸುರಕ್ಷಿತವಾಗಿಡುವ ರಕ್ಷಣಾ ಸಿಬ್ಬಂದಿಗೆ ಸೆಲ್ಯೂಟ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಷರತ್ತುಬದ್ಧ ನಿಯಮಗಳೊಂದಿಗೆ ಗಣೇಶೋತ್ಸವಕ್ಕೆ ಅನುಮತಿ
ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ದಕ್ಷಿಣ ಭಾಗದಿಂದ ಸುಮಾರು 25 ಕಿಮೀ ದೂರದಲ್ಲಿ, ಕ್ವೆಟ್ಟಾ ಮಸ್ತುಂಗ್ ರಸ್ತೆಯ ಅರೆ ಮಿಲಿಟರಿ ಫ್ರಂಟಿಯರ್ ಕಾಪ್ರ್ಸ್ ಇರುವ ಚೆಕ್ಪಾಯಿಂಟ್ ಸಮೀಪ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಶೇಖ್ ಜೈದ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Condemn the TTP suicide attack on FC checkpost, Mastung road, Quetta. My condolences go to the families of the martyrs & prayers for the recovery of the injured. Salute our security forces & their sacrifices to keep us safe by thwarting foreign-backed terrorists’ designs.
— Imran Khan (@ImranKhanPTI) September 5, 2021
ಟಿಟಿಪಿ ಸಂಘಟನೆಯ ಸಮಸ್ಯೆಗಳನ್ನು ಇಮ್ರಾನ್ ಖಾನ್ ಸರ್ಕಾರ ಶೀಘ್ರವೇ ಬಗೆಹರಿಸಬೇಕು. ಅದನ್ನು ಬಗೆಹರಿಸಬೇಕಾಗಿದ್ದು ಅಫ್ಘಾನಿಸ್ತಾನವಲ್ಲ. ಸಂಘಟನೆಯ ಕಷ್ಟ ಆಲಿಸಿ ಪರಿಹಾರ ಕೊಡುವ ಜವಾಬ್ದಾರಿ ಪಾಕಿಸ್ತಾನಿ ಸರ್ಕಾರ, ಧಾರ್ಮಿಕ ಗುಂಪುಗಳದ್ದೇ ಹೊರತು, ಅಫ್ಘಾನಿಸ್ತಾನದ ತಾಲಿಬಾನಿಗಳದ್ದಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದರು. ಈ ಮೂಲಕ ಟಿಟಿಪಿಗೂ ತಮಗೂ ಸಂಬಂಧವಿಲ್ಲ ಎಂದಿದ್ದರು. ಇತ್ತೀಚೆಗೆ ಈ ಬಲೂಚಿಸ್ತಾನ ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಉಗ್ರರ ದಾಳಿಗಳು ಪದೇಪದೆ ನಡೆಯುತ್ತಿವೆ.