ಸಿನಿಮಾ ಭರಾಟೆಲಿ ತೊಗಲು ಬೊಂಬೆ ಕಲೆ ನಶಿಸಿ ಹೋಗುತ್ತಿದೆ: ಪದ್ಮಶ್ರೀ ವಿಜೇತೆ ಭೀಮವ್ವ

Public TV
1 Min Read
Padmashri Award Winner Bhimavva

– ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದ

ಹುಬ್ಬಳ್ಳಿ: ಸಿನಿಮಾ ಭರಾಟೆಯಲ್ಲಿ ತೊಗಲು ಬೊಂಬೆ ಕಲೆಯು ನಶಿಸಿ ಹೋಗುತ್ತಿದೆ. ಆದರೆ ಈ ಕಲೆ ಉಳಿಯಬೇಕು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತೆ ಭೀಮವ್ವ (Bhimavva) ಹೇಳಿದರು.

ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಜನಾಂಗಕ್ಕೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಈ ತೊಗಲು ಗೊಂಬೆ (Togalu Gombe) ಕಲೆಯನ್ನು ಕಲಿಸುತ್ತೇನೆ. ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಬಹಳಷ್ಟು ಸಂತೋಷವಾಗಿದೆ. ದೇಶ, ವಿದೇಶದಲ್ಲಿ ಕಲೆ ಪ್ರದರ್ಶನ ಮಾಡಿದ್ದೇನೆ. ಇನ್ನೂ ಮುಂದೆ ಕಲೆ ಉಳಿಸುವ ಕಾರ್ಯ ಮಾಡುವೆ ಎಂದರು. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್‌ ಕಿತ್ತಾಟ

ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ (Padma Shri award) ಪಡೆದಿರುವ ಕೊಪ್ಪಳ ಜಿಲ್ಲೆಯ ಭೀಮವ್ವ ಅವರು ದೆಹಲಿಯಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದರು. ಬಳಿಕ ಹುಬ್ಬಳ್ಳಿಯಿಂದ ಕುಟುಂಬಸ್ಥರ ಜೊತೆಗೆ ಸ್ವಗ್ರಾಮಕ್ಕೆ ತೆರಳಿದರು.

Share This Article