Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾಲ್ಕನೇ ಬಾರಿ ಲೋಕ ಗದ್ದುಗೆ ಏರಿದ ಗದ್ದಿಗೌಡರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bagalkot | ನಾಲ್ಕನೇ ಬಾರಿ ಲೋಕ ಗದ್ದುಗೆ ಏರಿದ ಗದ್ದಿಗೌಡರ್

Bagalkot

ನಾಲ್ಕನೇ ಬಾರಿ ಲೋಕ ಗದ್ದುಗೆ ಏರಿದ ಗದ್ದಿಗೌಡರ್

Public TV
Last updated: May 24, 2019 10:38 pm
Public TV
Share
4 Min Read
P.C gaddugoudar
SHARE

ಬಾಗಲಕೋಟೆ: ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದೀಗೌಡರ್ 1,63,054 ಅಂತರ ಮತದಿಂದ ಗೆಲುವು ಸಾಧಿಸಿ ನಾಲ್ಕನೇಯ ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ.

ಗದ್ದೀಗೌಡರ್ ಕಾಂಗ್ರೆಸ್ ಅಭ್ಯರ್ಥಿಯಾದ ವೀಣಾ ಕಾಶಪ್ಪನವರ ವಿರುದ್ಧ 1,63,054 ಅಂತರ ಮತ ಪಡೆದಿದ್ದಾರೆ. ಗದ್ದೀಗೌಡರ್ 6,36,953 ಮತ ಪಡೆದರೆ, ವೀಣಾ ಕಾಶಪ್ಪನವರ 4,73,899 ಮತ ಪಡೆದು ಗೆದಿದ್ದಾರೆ.

ಪಿ.ಸಿ ಗದ್ದೀಗೌಡರ್  ಗೆದ್ದಿದ್ದು ಹೇಗೆ?
ಮೂಲತಃ ಬಾಗಲಕೋಟೆ ಸದ್ಯ ಬಿಜೆಪಿ ಭದ್ರ ಕೋಟೆ ಎನಿಸಿದ್ದು, ಎಲ್ಲಿ ನೋಡಿದ್ರು ಮೋದಿ ಹವಾ ಮೂಡಿತ್ತು. ಪ್ರಬಲ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ ಪಿ.ಸಿ ಗದ್ದೀಗೌಡರ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಎಲ್ಲ ಸಮುದಾಯದವರ ಜೊತೆ ಕೋಮು ಸೌಹಾರ್ಧತೆಯಿಂದ ನಡೆದುಕೊಂಡು ಬಂದಿದ್ದಾರೆ. ಸತತ ಮೂರು ಬಾರಿ ಸಂಸದರಾಗುವ ಮುಲಕ ಹ್ಯಾಟ್ರಿಕ್ ಹೀರೋ ಎಂಬ ಖ್ಯಾತಿ ಪಡೆದಿದ್ದಾರೆ. ಜಮಖಂಡಿ ಭಾಗದ ಗಾಣಿಗರು ಪಕ್ಷ ನಿಷ್ಠೆಗಿಂತ ಸಮುದಾಯಕ್ಕೆ ನಿಷ್ಠೆಯನ್ನು ತೋರಿ ಗದ್ದಿಗೌಡರಗೆ ಮತ ಹಾಕಿದ್ದಾರೆ.

bgk celebration

ಹುನಗುಂದ ಭಾಗದಲ್ಲಿ ದಲಿತರ ಮೇಲೆ ವಿಜಯಾನಂದ ಕಾಶಪ್ಪನವರ ದಬ್ಬಾಳಿಕೆ ಆರೋಪ ಗದ್ದೀಗೌಡರ್ ಗೆ ಪ್ಲಸ್ ಆಗಿದೆ. ಯುವ ಮತದಾರರು ಮೋದಿ ಅಲೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ತಡವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದು, ಸಮರ್ಪಕ ಪ್ರಚಾರ ನಡೆಸದೇ ಇರುವುದು ಗದ್ದೀಗೌಡರ್ ಗೆ ಲಕ್ ಆಗಿದೆ. ಬಾಗಲಕೋಟೆ ಲೊಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಜನ ಬಿಜೆಪಿ ಶಾಸಕರಿರೋದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ. ಗದ್ದೀಗೌಡರ್ ಪರ ಮೋದಿ ಎಪ್ರಿಲ್ 18ರಂದು ಬಾಗಲಕೋಟೆಗೆ ಆಗಮಿಸಿ, ಪಕ್ಷದ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ್ದರು.

ವೀಣಾ ಕಾಶಪ್ಪನವರ ಸೋಲಿಗೆ ಕಾರಣಗಳು?
ವೀಣಾ ಕಾಶಪ್ಪನವರಗೆ ಪತಿ ವಿಜಯಾನಂದ ಕಾಶಪ್ಪನವರ ಅವರೇ ವಿಲನ್. ಏಕೆಂದರೆ ವಿಜಯಾನಂದ ಕಾಶಪ್ಪನವರ ನಡುವಳಿಕೆ ಹಾಗೂ ಗೂಂಡಾ ವರ್ತನೆ ವೀಣಾ ಕಾಶಪ್ಪನವರ ಸೋಲಿಗೆ ಪ್ರಮುಖ ಕಾರಣ. ವಿಜಯಾನಂದ ಕ್ಷೇತ್ರದ 2 ಲಕ್ಷ 70 ಸಾವಿರ ಮತದಾರರನ್ನು ಹೊಂದಿದ ಪ್ರಭಲ ಸಮುದಾಯ ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡಿದ್ದರು. ವಿಜಯಾನಂದ ತಮ್ಮ ಕ್ಷೇತ್ರ ಹುನಗುಂದ ವಿಧಾನಸಭಾ ಕ್ಷೇತ್ರದ ಕುರುಬ ಸಮುದಾಯದ ಮುಖಂಡ ಮುಕ್ಕಣ್ಣ ಮುಕ್ಕಣ್ಣವರ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿತ್ತು.

veena kashapanavar

ಪಿಕೆಪಿಎಸ್ ಚುನಾವಣೆ ವೇಳೆ ವಿಜಯಾನಂದ ಕಾಶಪ್ಪನವರ ಹಾಗೂ ಮುಕ್ಕಣ್ಣವರ್ ಮಧ್ಯೆ ಜಗಳ ನಡೆದಿತ್ತು. ಇಬ್ಬರ ಬೆಂಬಲಿಗರು ಪರಸ್ಪರ ಬಡಿದಾಡಿಕೊಂಡಿದ್ದರು. ನಂತರ ಘಟನೆಯಿಂದ ಗಾಯಗೊಂಡ ಮುಕ್ಕಣ್ಣ ಮುಕ್ಕಣ್ಣವರ ಕೆಲ ದಿನಗಳ ನಂತರ ಸಾವನ್ನಪ್ಪಿದ್ದರು. ಮುಕ್ಕಣ್ಣ ಸಾವಿಗೆ ವಿಜಯಾನಂದ ಕಾಶಪ್ಪನವರ ಕಾರಣ ಎಂದು ಕುರುಬ ಸಮುದಾಯದ ಜನರು ಆರೋಪ ಮಾಡಿದ್ದರು. ಇದರಿಂದ ಕುರುಬ ಸಮುದಾಯ ವಿಜಯಾನಂದ ಕಾಶಪ್ಪನವರ ಮೇಲಿನ ಸೇಡನ್ನು ವೀಣಾ ಮೇಲೆ ತೀರಿಸಿಕೊಂಡಿದ್ದಾರೆ.

ವಿಜಯಾನಂದ್ ಮೊದಲಿನಿಂದಲೂ ಒಂದಿಲ್ಲೊಂದು ಕಾರಣದಿಂದ ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡಿದ್ದರು. ಮಾಜಿ ಸಚಿವ ಎಸ್.ಆರ್ ಪಾಟಿಲ್ ಹಾಲಿ ಸಚಿವ ಆರ್.ಬಿ ತಿಮ್ಮಾಪುರ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ್ದರು. ಕಳೆದ ಬಾರಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಾಗ ತನ್ನ ಸೋಲಿಗೆ ಎಸ್.ಆರ್ ಪಾಟೀಲ್ ಹಾಗೂ ಆರ್.ಬಿ ತಿಮ್ಮಾಪುರ ಅವರೇ ಕಾರಣ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದರಿಂದ ಎಸ್.ಆರ್ ಪಾಟೀಲ್ ಸಮುದಾಯದ ಲಿಂಗಾಯತ ರೆಡ್ಡಿ ಮತಗಳು ಕೈ ಕೊಟ್ಟಿತ್ತು.

veena kashappanavara 1

ಆರ್.ಬಿ ತಿಮ್ಮಾಪುರ ಸಮುದಾಯದ ಎಸ್‍ಸಿ ಮತಗಳು ವೀಣಾಗೆ ಬರಲಿಲ್ಲ. ಕುರುಬ ಸಮುದಾಯದ ಮುಖಂಡ ಬಾಗಲಕೋಟೆ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ ಮೇಟಿ ಜೊತೆ ಆಂತರಿಕ ಭಿನ್ನಮತ ಮೂಡಿತ್ತು. ಹೆಚ್.ವೈ ಮೇಟಿ ಮಗಳು ಹಾಲಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ವಿರೋಧ ಕಟ್ಟಿಕೊಂಡಿದ್ದರು. ಜಿಪಂ ಅಧ್ಯಕ್ಷೆ ಗಾದಿಗಾಗಿ ಪೈಪೋಟಿ ನಡೆಸಿದ್ದ ಬಾಯಕ್ಕ ಮೇಟಿ ವೀಣಾ ವಿರುದ್ಧ ತೊಡೆ ತಟ್ಟಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಬಡಿದಾಡಿದ್ದರು. ಈ ವೇಳೆ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಪರವಾಗಿಯೇ ನಿಂತು, ಬಾಯಕ್ಕ ಮೇಟಿ ಒಳಗೊಳಗೆ ವೀಣಾ ವಿರುದ್ಧ ಕತ್ತಿ ಮಸೆದಿದ್ದರು.

ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವ ಇದ್ದರೂ ಕುರುಬ ಸಮುದಾಯದ ಜನರು ಸ್ಥಳೀಯವಾಗಿ ವಿಜಯಾನಂದ ಕಾಶಪ್ಪನವರ ವಿರುದ್ಧ ವಾಗಿದ್ದರು. ಕುರುಬ ಸಮುದಾಯದ ಅಸಹನೆ ತಣಿಸುವಲ್ಲಿ ಸಿದ್ದರಾಮಯ್ಯ ಗಂಭೀರವಾಗಿ ಪ್ರಯತ್ನಿಸಲಿಲ್ಲ. ವೀಣಾ ಕಾಶಪ್ಪನವರ್ ಎಂಪಿ ಆದರೆ ಪತಿ ವಿಜಯಾನಂದ ಕಾಶಪ್ಪನವರ ನಮ್ಮನ್ನು ಮೂಲೆ ಗುಂಪು ಮಾಡೋದು ಖಚಿತ ಎಂಬ ಕೈ ಮುಖಂಡರ ಭಯ ಮೂಡಿತ್ತು. ಇದರಿಂದ ಒಳ ಹೊಡೆತಕ್ಕೆ ಕೈ ಮುಖಂಡರು ಮುಂದಾಗಿದ್ದಾರೆ.

bgk celebration 1

ಜಿಪಂ ಅಧ್ಯಕ್ಷೆಯಾಗಿದ್ದ ವೇಳೆ ಲಿಂಗಾಯ ಬಣಜಿಗ(ಶೆಟ್ಟರ್) ಬಗ್ಗೆ ವೀಣಾ ಕಾಶಪ್ಪನವರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನೀವು ಶೆಟ್ಟರು ಮಲ್ಲಪ್ಪ ಶೆಟ್ಟಿ ವಂಶದವರು ಹುಷಾರಾಗಿರಬೇಕು ಎಂದು ತಮಾಷೆಗೆ ಹೇಳಿದ ಮಾತಾದರೂ ಶೆಟ್ಟರ್ ಸಮುದಾಯ ಅದನ್ನು ಗಂಭೀರವಾಗಿ ತೆಗೆದುಕೊಂಡು ಅಸಮಾಧಾನ ಹೊರಹಾಕಿದ್ದರು. ಈ ಅಸಮಾಧಾನ ಶಮನ ಮಾಡುವಲ್ಲಿ ಹೆಚ್ಚಿನ ಮಟ್ಟದ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಬಣಜಿಗ ಮತಗಳು ಸ್ವಲ್ಪ ಪ್ರಮಾಣದಲ್ಲಿ ಕೈ ತಪ್ಪಿತ್ತು.

bgk celebration 2

ವೀಣಾ ಕಾಶಪ್ಪನವರ ಪ್ರಭಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಆದರೂ ಸಂಪೂರ್ಣವಾಗಿ ಪಂಚಮಸಾಲಿ ಮತಗಳು ಬಾರದಿದ್ದರು. ಬಿಜೆಪಿ ಹಾಗೂ ಬಿಎಸ್‍ವೈ ಅಭಿಮಾನದಿಂದ ಕೆಲ ಪ್ರಮಾಣದ ಪಂಚಮಸಾಲಿಗಳು ಬಿಜೆಪಿಗೆ ಬೆಂಬಲಿಸಿದ್ದಾರೆ. ಕಳೆದ ಬಾರಿ ಹುನಗುಂದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಸ್‍ಆರ್ ನವಲಿಹಿರೇಮಠ ಬಗ್ಗೆ ಅವಾಚ್ಯ ಶಬ್ಧಗಳಿಂದ ವಿಜಯಾನಂದ ಕಾಶಪ್ಪನವರ ನಿಂಧಿಸಿದ್ದರ ಪರಿಣಾಮ ಜೆಡಿಎಸ್ ಮತಗಳು ನಿರೀಕ್ಷೆ ಮಟ್ಟದಲ್ಲಿ ಬರಲಿಲ್ಲ.

ಸಿದ್ದರಾಮಯ್ಯ ನಾಲ್ಕು ಬಾರಿ, ದಿನೇಶ್ ಗುಂಡೂರಾವ್ ಎರಡು ಬಾರಿ ಹೊರತುಪಡಿಸಿದರೆ ಕಾಂಗ್ರೆಸ್‍ನ ರಾಷ್ಟ್ರಮಟ್ಟದ ನಾಯಕರು ಯಾರೂ ಪ್ರಚಾರಕ್ಕೆ ಬಾರಲಿಲ್ಲ. ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಗಾಣಿಗ ಸಮುದಾಯದವರೇ ಆದರೂ ಜಮಖಂಡಿ ಬಾಗದ ಗಾಣಿಗ ಸಮುದಾಯದ ಮತಗಳನ್ನು ಕಾಂಗ್ರೆಸ್‍ಗೆ ಸೆಳೆಯುವಲ್ಲಿ ಅಷ್ಟಾಗಿ ಸಫಲವಾಗದೇ ವಿಫಲರಾಗಿದ್ದಾರೆ.

TAGGED:bagalkoteelectionP. C. GaddigoudarPublic TVresultVeena kashappanavarಚುನಾವಣೆಪಬ್ಲಿಕ್ ಟಿವಿಪಿ.ಸಿ ಗದ್ದೀಗೌಡರ್ಫಲಿತಾಂಶಬಾಗಲಕೋಟೆವೀಣಾ ಕಾಶಪ್ಪನವರ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

rahul gandhi
Bengaluru City

ಕರ್ನಾಟಕ ಬಿಜೆಪಿ ವಿರುದ್ಧ 40% ಕಮೀಷನ್‌ ಜಾಹೀರಾತು – ರಾಹುಲ್‌ಗೆ ರಿಲೀಫ್‌, ವಿಚಾರಣೆಯೇ ರದ್ದು

Public TV
By Public TV
5 hours ago
Ramanagar Arrest
Districts

16.8 ಲಕ್ಷ ಮೌಲ್ಯದ 120 ಗ್ರಾಂ ಚಿನ್ನದ ಗಟ್ಟಿ ಕಳ್ಳತನ – ಇಬ್ಬರು ಅರೆಸ್ಟ್

Public TV
By Public TV
5 hours ago
Fire breaks out at bike garage more than 8 bikes burnt Ilkal Bagalkote
Bagalkot

ಬೈಕ್ ಗ್ಯಾರೇಜ್‌ಗೆ ಬೆಂಕಿ- 8ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಭಸ್ಮ

Public TV
By Public TV
6 hours ago
01 11
Big Bulletin

ಬಿಗ್‌ ಬುಲೆಟಿನ್‌ 17 February 2026 ಭಾಗ-1

Public TV
By Public TV
6 hours ago
02 12
Big Bulletin

ಬಿಗ್‌ ಬುಲೆಟಿನ್‌ 17 February 2026 ಭಾಗ-2

Public TV
By Public TV
6 hours ago
03 10
Big Bulletin

ಬಿಗ್‌ ಬುಲೆಟಿನ್‌ 17 February 2026 ಭಾಗ-3

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?