ಕೃಷಿ ಹೊಂಡದಲ್ಲಿ ಬಿದ್ದ ಕುರಿ ರಕ್ಷಣೆ ಮಾಡಿ ಮೇಲೆ ಬರಲಾಗದೆ ಪ್ರಾಣ ಬಿಟ್ಟ ಮಾಲೀಕ

Public TV
1 Min Read
ckb farmer death

ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಬಿದ್ದ ಕುರಿಯನ್ನ ರಕ್ಷಣೆ ಮಾಡಿದ ಕುರಿಯ ಮಾಲೀಕರೊಬ್ಬರು ಮೇಲೆ ಬರಲಾಗದೆ ಕೃಷಿ ಹೊಂಡದಲ್ಲೇ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಮೇಲೂರು ಗ್ರಾಮದಲ್ಲಿ ನಡೆದಿದೆ.

ckb 1

ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಿಳ್ಳವೆಂಕಟರೋಣಪ್ಪ ಮೃತ ವ್ಯಕ್ತಿ. ಕುರಿಗಳನ್ನ ಮೇಯಿಸುತ್ತಿದ್ದ ವೇಳೆ ಪಾಪಣ್ಣ ಎಂಬವರ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಕುರಿಯೊಂದು ಬಿದ್ದಿದೆ. ಈ ವೇಳೆ ಕೃಷಿ ಹೊಂಡಕ್ಕೆ ಜಿಗಿದು ಕುರಿಯನ್ನ ಮೇಲೆ ಎತ್ತಿ ಹಾಕಿದ ಮಾಲೀಕ ವೆಂಕಟರೋಣಪ್ಪ, ಕೃಷಿ ಹೊಂಡದಿಂದ ಕೊನೆಗೆ ತಾನು ಮೇಲೆ ಬರಲಾಗದೆ ಕೃಷಿ ಹೊಂಡದಲ್ಲೇ ಜೀವ ಬಿಟ್ಟಿದ್ದಾರೆ.

ckb 7

ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಮೃತದೇಹವನ್ನ ಮೇಲೆತ್ತಿದ್ದಾರೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ckb 6

ckb 11

ckb 10

ckb 9

ckb 8

Share This Article
Leave a Comment

Leave a Reply

Your email address will not be published. Required fields are marked *