ಬೆಂಗಳೂರು: ಬಿಜೆಪಿ ಹೈಕಮಾಂಡ್ (BJP HighCommand) ನಿಂದ ಆಪರೇಷನ್ ನ್ಯೂ ಸ್ಟಾರ್ ತಂತ್ರ ಶುರುವಾಗಿದೆ. ಟಾರ್ಗೆಟ್ 30 ಟಾಸ್ಕ್ ಪಡೆದಿರುವ ರಾಜ್ಯ ಬಿಜೆಪಿ ನಾಯಕರು, ಫೆಬ್ರವರಿಯೊಳಗೆ ಕಾಂಗ್ರೆಸ್ ಟಿಕೆಟ್ (Congress Ticket) ಘೋಷಣೆ ಮಾಡುವುದನ್ನೇ ಕಾಯುತ್ತಿದ್ದಾರೆ ಎನ್ನಲಾಗಿದೆ. ಅಲ್ಲಿ ಟಿಕೆಟ್ ಸಿಗದವರಿಗೆ ಗಾಳ ಹಾಕುವ ಬಗ್ಗೆ ಮೆಗಾ ಪ್ಲಾನ್ ನಡೆದಿದ್ದು, ಅಲ್ಲಿ ಸಿಗದಿದ್ದವರಿಗೆ ಇಲ್ಲಿ ಆಸೆ ಎಂಬ ಹೊಸ ಅಸ್ತ್ರ ಅಂತೆ.
ಕನಿಷ್ಠ 30 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು ಹಾಕಿದೆ ಎನ್ನಲಾಗಿದೆ. ಕಾಂಗ್ರೆಸ್ ಬಂಡಾಯಕ್ಕೆ ‘ಕೈ’ ಹಾಕಿದ್ರೆ ಬಿಜೆಪಿಗೆ ಬಂಪರ್ ಬೆಳೆ ಎಂಬ ಲೆಕ್ಕಚಾರ. ಅಲ್ಲಿ ಟಿಕೆಟ್ ಸಿಗದಿದ್ದವರಿಗೆ ಇಲ್ಲಿ ನಿಗಮ ಮಂಡಳಿ, ಎಂಎಲ್ಸಿ ಆಸೆ ತೋರಿಸಿ ಎಂಬುದು ಬಿಜೆಪಿ ಹೈಕಮಾಂಡ್ ತಂತ್ರ. ಮಾರ್ಚ್ನಲ್ಲಿ ಬಿಜೆಪಿ ಟಿಕೆಟ್ ಘೋಷಣೆ ಬಗ್ಗೆ ಬಿಜೆಪಿ ಹೈಕಮಾಂಡ್ ಸಂದೇಶ ರವಾನಿಸಿದೆ. ಅದಕ್ಕೂ ಮುನ್ನ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದ್ರೆ ಬಿಜೆಪಿ ತಂತ್ರ ಆಪರೇಷನ್ ನ್ಯೂ ಸ್ಟಾರ್ ಎನ್ನಲಾಗಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದ್ರೆ ಕನಿಷ್ಠ 30 ಕ್ಷೇತ್ರಗಳನ್ನ ಟಾರ್ಗೆಟ್ ಮಾಡಿಕೊಳ್ಳಿ ಎಂದು ಹೈಕಮಾಂಡ್ ಸೂಚಿಸಿದೆ ಎಂಬುದು ಮೂಲಗಳ ಮಾಹಿತಿ. ಇದನ್ನೂ ಓದಿ: ಮುತಾಲಿಕ್ ವಿರುದ್ಧ ಅಭ್ಯರ್ಥಿ ಹಾಕಿದ್ರೆ ಸಿ.ಟಿ.ರವಿ ವಿರುದ್ಧವೂ ಅಭ್ಯರ್ಥಿ : ಶ್ರೀರಾಮಸೇನೆ ಎಚ್ಚರಿಕೆ
ಬಂಡಾಯ ಶಮನಕ್ಕೂ ಮುನ್ನವೇ ಕೈ ಟಿಕೆಟ್ ವಂಚಿತರನ್ನ ಬಿಜೆಪಿಗೆ ಸೆಳೆಯಿರಿ. ಅಲ್ಲಿ ಟಿಕೆಟ್ ವಂಚಿತರಿಗೆ ಸಾಧ್ಯವಾದ್ರೆ ನಮ್ಮಲ್ಲಿ ಟಿಕೆಟ್ ಕೊಡೋಣ, ಇಲ್ಲದಿದ್ದರೆ ಪರ್ಯಾಯ ಸ್ಥಾನ ಕೊಡೋಣ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಟ್ರಾಂಗ್ ಇದ್ದರೆ ಎಂಎಲ್ಸಿ ಸ್ಥಾನಮಾನ ಕೊಡುವ ಭರವಸೆ ಕೊಡಿ ಎಂಬುದು ಬಿಜೆಪಿ ಹೈಕಮಾಂಡ್ನ ಪ್ಲ್ಯಾನ್ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ನಿಂದ ಆಪರೇಷನ್ ನ್ಯೂ ಸ್ಟಾರ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಬಂಡಾಯಗಾರರೇ ಬಿಜೆಪಿಗೆ ಬಂಡವಾಳನಾ..? ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಬಳಿ ತಿರುಗುಬಾಣ ಅಸ್ತ್ರ ಏನಾದ್ರೂ ಇದೆಯಾ…? ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k