ಆಂಧ್ರ ಬಸ್ ಡಿಕ್ಕಿಯಾಗಿ ಮಗುಚಿ ಬಿದ್ದ ಓಮ್ನಿ: ಓರ್ವನ ಕಾಲು ಮುರಿತ

Public TV
0 Min Read
CAR

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಬಸ್ ಮತ್ತು ಒಮ್ನಿ ನಡುವೆ ಅಪಘಾತ ಸಂಭವಿಸಿದೆ.

ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಾರ್ಕೆಟ್ ಕಡೆಯಿಂದ ರಾಮಮೂರ್ತಿನಗರಕ್ಕೆ ಹೊಗುತ್ತಿದ್ದ ಓಮ್ನಿ ಕಾರಿಗೆ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮಗುಚಿಬಿದ್ದಿದೆ. ಕಾರನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಗೋಪಾಲ್ ಎನ್ನುವವರ ಕಾಲು ಮುರಿದಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಗಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

ಸದ್ಯ ಗಾಯಾಳು ಗೋಪಾಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

vlcsnap 2017 09 25 08h35m34s115

vlcsnap 2017 09 25 08h35m22s6

vlcsnap 2017 09 25 08h35m14s193

vlcsnap 2017 09 25 08h35m08s114

vlcsnap 2017 09 25 08h35m58s99

vlcsnap 2017 09 25 08h34m57s8

vlcsnap 2017 09 25 08h34m50s203

vlcsnap 2017 09 25 08h34m43s126 Copy

vlcsnap 2017 09 25 08h36m06s198

Share This Article
Leave a Comment

Leave a Reply

Your email address will not be published. Required fields are marked *