ಚಿಕ್ಕಮಗಳೂರು: ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ 85 ವರ್ಷದ ವೃದ್ಧೆಯನ್ನ ಸ್ಥಳೀಯರು ರಕ್ಷಣೆ ಮಾಡಿರುವ ಫಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಾಲುಮುತ್ತೂರು ಗ್ರಾಮದಲ್ಲಿ ನಡೆದಿದೆ.
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮನನೊಂದು ಮಲಕಮ್ಮ ಎಂಬ ವೃದ್ಧೆ ಇಂದು ಮಧ್ಯಾಹ್ನ ಹಾಲುಮುತ್ತೂರು ಗ್ರಾಮದಲ್ಲಿರುವ 80 ಅಡಿ ಆಳದ ಕುಡಿಯುವ ನೀರಿನ ಬಾವಿಗೆ ಧುಮುಕಿ ಅತ್ಮಹತ್ಯೆಗೆ ಯತ್ನಿಸಿದ್ದರು.
ಆದ್ರೆ 40 ಅಡಿ ಆಳದಲ್ಲಿದ್ದ ಬಾವಿಯ ನೀರು ಎತ್ತುವ ಮೋಟರ್ ಪೈಪ್ಗೆ ವೃದ್ಧೆ ಸಿಕ್ಕಿಹಾಕಿಕೊಂಡಿದ್ರು. ನಂತರ ಸ್ಥಳೀಯರು ಬುಟ್ಟಿಗೆ ಹಗ್ಗ ಕಟ್ಟಿ ಬಾವಿಯೊಳಗೆ ಇಳಿಬಿಟ್ಟು ವೃದ್ಧೆಯನ್ನ ರಕ್ಷಣೆ ಮಾಡಿದ್ದಾರೆ.
ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
https://www.youtube.com/watch?v=TJ_0TH5zqt0&feature=youtu.be