ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಇಂದು ಹಲ್ಲೆಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ಗ್ರಾಮಸ್ಥರು ಚಂದ್ರಬಾಬು ನಾಯ್ಡು ಬರುತ್ತಿದ್ದಾರೆ ಎಂದು ಹೇಳಿದರು. ಆಗ ಯಶ್ ಓ… ರಿಯಲಿ. ಇಸ್ ಇಟ್. ಸೋ ಫನ್ನಿ ಎಂದು ಸಿನಿಮಾ ಸ್ಟೈಲ್ನಲ್ಲಿ ಪ್ರತಿಕ್ರಿಯೆ ನೀಡಿದರು.
ಹಲ್ಲೆಗೆರೆಯಲ್ಲಿ ಪ್ರಚಾರದ ವೇಳೆ ಗ್ರಾಮಸ್ಥರು ಚಂದ್ರಬಾಬು ನಾಯ್ಡು ಬರುತ್ತಿದ್ದಾರೆ ಎಂದು ಯಶ್ಗೆ ಹೇಳಿದರು. ಆಗ ಯಶ್, ಹೇ. ಸುಮ್ಮನಿರೋ ಜೋಕ್ ಮಾಡಬೇಡ. ಬಳಿಕ ಸಿನಿಮಾ ಸ್ಟೈಲ್ನಲ್ಲಿ ಓ… ರಿಯಲಿ. ಇಸ್ ಇಟ್. ಇದಕ್ಕಿಂತ ಜೋಕ್ ಇಲ್ಲ. ಹಂಗೆನಾದ್ರು ಆದ್ರೆ ನಾನು ಏನೂ ಹೇಳಲ್ಲ. ನಿಮಗೆ ಗೊತ್ತು. ನೀವೇ ಯೋಚನೆ ಮಾಡಿಕೊಳ್ಳಿ ಎಂದು ಪ್ರತಿಕ್ರಿಯಿಸಿದರು.
ಬಳಿಕ ಮಾತನಾಡಿದ ಅವರು, ಸುಮಲತಾ ಅವರು ಅಂಬರೀಶ್ ಅವರನ್ನು ಮದುವೆಯಾಗಿ ಅವರ ವಂಶವನ್ನು ಬೆಳೆಸಿದ್ದಾರೆ. ಅವರನ್ನು ಗೌಡ್ತಿ ಅಲ್ಲ ಎಂಬ ಮಾತುಗಳು ನಾವು ಕೇಳಿದ್ದೇವೆ. ಆದರೆ ಈಗ ಮೈತ್ರಿ ಪಕ್ಷ ಈಗ ಚಂದ್ರಬಾಬು ನಾಯ್ಡು ಅವರನ್ನೇ ಪ್ರಚಾರಕ್ಕೆ ಕರೆಸುತ್ತಿದ್ದಾರೆ ಎಂದು ಪ್ರಚಾರದ ವೇಳೆ ಹೇಳಿದರು.