Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dakshina Kannada

ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

Public TV
Last updated: May 31, 2025 9:02 am
Public TV
Share
3 Min Read
Mangaluru 3
SHARE

– ದಕ್ಷಿಣ ಕನ್ನಡದಲ್ಲಿ ʻಮರಣ ಮಳೆʼಗೆ ಒಂದೇ ದಿನ 7 ಬಲಿ

ಮಂಗಳೂರು: ನಗರದ ಹೊರವಲಯದ ಮಂಜನಾಡಿಯ ಮೊಂಟೆಪದವು ಗುಡ್ಡಕುಸಿತದಿಂದ (Montepadavu Landslide) ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಪೊಲೀಸ್ ಠಾಣೆಗೆ (Konaje Police Station) ದೂರು ನೀಡಲಾಗಿದೆ.

ಹರೇಕಳ ಗ್ರಾಮದ ತೇಜುಕುಮಾರ್‌ ಎಂಬುವವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುಡ್ಡ ಕುಸಿದ ಘಟನೆಗೆ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಯೇ ಕಾರಣ. ಮಂಜನಾಡಿ ಗ್ರಾಪಂ ಪಿಡಿಓ ಚೈತ್ರಾ ಮತ್ತು ಕೆಆರ್‌ಡಿಐಎಲ್  (KRDIL) ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಕಾಮಗಾರಿಯೇ ದುರಂತಕ್ಕೆ ಕಾರಣ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ವರುಣಾರ್ಭಟ; ಮಳೆಗೆ 6 ಮಂದಿ ಬಲಿ

Mangaluru 1

ಒಂದೇ ದಿನ 7 ಬಲಿ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಣ ಮಳೆಗೆ ಶುಕ್ರವಾರ ಒಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ 7 ಜನ ಬಲಿಯಾಗಿದ್ದಾರೆ. ಉಳ್ಳಾಲದ ಮೊಂಟೆಪದವು ಕೋಡಿಯ ಕಾಂತಪ್ಪ ಪೂಜಾರಿ ಅನ್ನೋವ್ರ ಮನೆ ಮೇಲೆ ಗುಡ್ಡ ಕುಸಿದಿದೆ. ವೃದ್ಧೆ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರುಷ್, ಆರ್ಯನ್ ಸಾವನ್ನಪ್ಪಿದ್ದಾರೆ. ಮುಂಜಾನೆ 4.30ರ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದಾಗಲೇ ಈ ಘೋರ ದುರಂತ ಸಂಭವಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆಗೆ 5 ಸಾವು – 8 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

MNG OFFICERS NEGLIGENCE DEATH AV 1

ಗುಡ್ಡ ಕುಸಿಯೋ ಶಬ್ಬ ಕೇಳಿ ಪತಿ ಸೀತಾರಾಮ ಮನೆಯಿಂದ ಓಡಿ ಹೊರ ಬಂದಿದ್ದು, ತಂದೆ ಕಾಂತಪ್ಪ ಪೂಜಾರಿ (65), ತಾಯಿ ಪ್ರೇಮಾ ಪೂಜಾರಿ (60), ಪತ್ನಿ ಅಶ್ವಿನಿ (31) ಮಕ್ಕಳಾದ ಆರ್ಯನ್ (2.5 ವರ್ಷ), ಆರುಷ್ (2.5 ವರ್ಷ) ಮಣ್ಣಿನಡಿ ಸಿಲುಕಿದ್ದರು. ಅವಶೇಷಗಳಡಿ ಸಿಲುಕಿದ್ದ ಕಾಂತಪ್ಪರನ್ನು ಸ್ಥಳೀಯರು ಬಂದು ರಕ್ಷಿಸಿದ್ದು, ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದನ್ನೂ ಓದಿ: ದ.ಕ ಜಿಲ್ಲೆಯಾದ್ಯಂತ ಭಾರೀ ಮಳೆ – ಶನಿವಾರ ಶಾಲೆಗಳಿಗೆ ರಜೆ ಘೋಷಣೆ

Mangaluru Rain Death 1

ಅವಶೇಷಗಳಡಿ ಸಿಲುಕಿದ್ದ ತಾಯಿ ಅಶ್ವಿನಿ, ಮಕ್ಕಳಾದ ಆರ್ಯನ್, ಆರುಷ್ ರಕ್ಷಣೆಗೆ ಬೆಳಗ್ಗೆ 6 ಗಂಟೆಯಿಂದಲೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಕಾರ್ಯಾಚರಣೆಗೆ ಇಳಿದಿದ್ರು. ಜೆಸಿಬಿ, ಹಿಟಾಚಿ ತೆರಳಲು ಸಾಧ್ಯವಾಗದ ದುರ್ಗಮ ರಸ್ತೆಯಾದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಯ್ತು. ತಾಯಿ ಅಶ್ವಿನಿ ಮಕ್ಕಳನ್ನು ಮಡಿಲಲ್ಲಿಟ್ಟುಕೊಂಡೇ ಮಲಗಿದ್ರು. ಮೂವರ ಮೇಲೂ ಗೋಡೆ ಕುಸಿದಿತ್ತು. ಆರ್ಯನ್ ಮೃತಪಟ್ಟಿದ್ದರೆ ಪುಟ್ಟಕಂದ ಆರುಷ್ ತಾಯಿ ತೋಳಿನಲ್ಲೇ ನರಳಾಡ್ತಿದ್ದ. ಮಕ್ಕಳನ್ನು ರಕ್ಷಿಸಿ ಅಂತ ತಾಯಿ ಅಂಗಲಾಚಿದರು. ಸತತ 10 ಗಂಟೆ ಕಾರ್ಯಾಚರಣೆ ಬಳಿಕ ದೊಡ್ಡಮಗು ಆರ್ಯನ್ ಮೃತದೇಹ ಹೊರತೆಗೆಯಲಾಯ್ತು. ಆರುಷ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ. ತಾಯಿ ಅಶ್ವಿನಿಯನ್ನು ರಕ್ಷಿಸಿ ಹೊರ ತೆಗೆದಾಗ ನನ್ನ ಮಕ್ಕಳೆಲ್ಲಿದ್ದಾರೆ…? ಹೇಗಿದ್ದಾರೆ..? ಅಂತ ಹಪಾಹಪಿಸಿದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಕ್ಕಳು ಸಾವನ್ನಪ್ಪಿರುವ ವಿಷಯ ತಿಳಿಸಿಲ್ಲ. ಕೊನೆಯದಾಗಿ ಪ್ರೇಮಾಪೂಜಾರಿ ದೇಹ ಹೊರತೆಗೆಯಲಾಯಿತು.

ನಾಡದೋಣಿ ಮಗುಚಿ ಇಬ್ಬರು ನೀರುಪಾಲು:
ಮಂಗಳೂರಿನ ತೋಟಬೆಂಗ್ರೆ ಅಳಿವೆ ಬಾಗಿಲು ಎಂಬಲ್ಲಿ ಕಡಲ ಅಬ್ಬರಕ್ಕೆ ನಾಡದೋಣಿ ಮಗುಚಿ ಇಬ್ಬರು ನೀರುಪಾಲಾಗಿದ್ದಾರೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ, ಕಮಲಾಕ್ಷ ಸಾವನ್ನಪ್ಪಿದ ಮೀನುಗಾರರಾಗಿದ್ದಾರೆ.

ಇನ್ನೂ ದೇರಳಕಟ್ಟೆಯ ಕಾನಕೆರೆ ಎಂಬಲ್ಲಿ ಕಾಂಪೌಂಡ್ ಗೋಡೆ ಕುಸಿದು 10 ವರ್ಷದ ನಯೀಮಾ ಎಂಬ ಬಾಲಕಿ ದುರ್ಮರಣಕ್ಕೀಡಾಗಿದ್ದಾರೆ. ನೌಶಾದ್ ಎಂಬುವರ ಮನೆಯ ಕಿಟಕಿಯ ಹಿಂಬದಿ ಗೋಡೆ ಕುಸಿದ್ದು ಮನೆ ಮೇಲೆ ಮಣ್ಣುಬಿದ್ದಿತ್ತು, ಗಾಯಗೊಂಡಿದ್ದ ಪುತ್ರಿ ನಯೀಮಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಾರೆ. ಮತ್ತೊಂದು ಕಡೆ, ಬೆಳ್ತಂಗಡಿಯ ಓಡಿನ್ಮಾಳ ಗ್ರಾಮದ ಕುಮ್ಮಂಜ ಎಂಬಲ್ಲಿ ಕರೆಂಟ್ ಶಾಕ್‌ನಿಂದ, ಲೈನ್‌ಮ್ಯಾನ್ ವೀರೇಶ್ ಜೈನ್ (27) ದುರ್ಮರಣಕ್ಕೀಡಾಗಿದ್ದಾರೆ.

TAGGED:dakshina kannadaMangaluruMangaluru RainsMontepadavu Landslideದಕ್ಷಿಣ ಕನ್ನಡಮಂಗಳೂರುಮಂಗಳೂರು ಮಳೆಮೊಂಟೆಪದವು ಗುಡ್ಡ ಕುಸಿತ
Share This Article
Facebook Whatsapp Whatsapp Telegram

You Might Also Like

siddaramaiah 11
Districts

ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ

Public TV
By Public TV
4 minutes ago
N. Ravikumar
Bengaluru City

ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ – ಸಿಎಂ, ಜಮೀರ್‌ ರಾಜೀನಾಮೆಗೆ ರವಿಕುಮಾರ್ ಆಗ್ರಹ

Public TV
By Public TV
10 minutes ago
b2 bunker buster
Districts

ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

Public TV
By Public TV
14 minutes ago
Sardaar Ji 3 Movie
Bollywood

ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

Public TV
By Public TV
21 minutes ago
Gadag Classroom Roof Collapse
Crime

Gadag | ಶಾಲಾ ಮೇಲ್ಛಾವಣಿ ಪದರ ಕುಸಿತ – ಓರ್ವ ಶಿಕ್ಷಕ, ಐವರು ವಿದ್ಯಾರ್ಥಿಗಳಿಗೆ ಗಾಯ

Public TV
By Public TV
38 minutes ago
Fordo Nuclear Facility
Latest

ಅಮೆರಿಕ ಬಳಿಕ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್‌ ದಾಳಿ

Public TV
By Public TV
39 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?