ವರ್ಗಾವಣೆ ಪರ್ವ- ಸಿಎಂ ಆಪರೇಷನ್ ಕಾರ್ಯಾಚರಣೆ ಹಿಂದಿದೆ ರಹಸ್ಯ

Public TV
1 Min Read
bsy home

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬಂದಾಗಿನಿಂದ ವರ್ಗಾವಣೆ ಸದ್ದು ಮಾಡುತ್ತಿದೆ. ಸಿಎಂ ಸಚಿವಾಲಯ ಸೇರಿದಂತೆ ಬೇರೆ ಇಲಾಖೆಗಳಲ್ಲಿ ವರ್ಗಾವಣೆ ಪರ್ವ ಮುಂದುವರಿದಿದೆ. ಈಗಾಗಲೇ 250ಕ್ಕೂ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಿಎಂ ಆಯಾ ಸ್ಥಳಕ್ಕೆ ಹೊಸಬರನ್ನು ತಂದಿದ್ದಾರೆ. ಸಿಎಂ ಸಚಿವಾಲಯ, ಆಯಕಟ್ಟಿನ ಸ್ಥಳಗಳು, ಬೇರೆ ಬೇರೆ ಇಲಾಖೆಗಳಲ್ಲಿ ವರ್ಗಾವಣೆ ನಡೆಯುತ್ತಿದೆ.

CM BSY a 1

ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವರ್ಗಾವಣೆ ಮಾಡುತ್ತಿದ್ದಾರಂತೆ. ಈ ಎಲ್ಲ ಅಧಿಕಾರಿಗಳು ಮಾಜಿ ಸಿಎಂಗಳ ನಿಕಟ ಸಂಪರ್ಕದಲ್ಲಿದ್ದು, ಆಡಳಿತದ ರಹಸ್ಯಗಳನ್ನು ವಿಪಕ್ಷಗಳಿಗೆ ನೀಡಿದ್ರೆ ಹೇಗೆ ಎಂಬ ಪ್ರಶ್ನೆ ಯಡಿಯೂರಪ್ಪರಿಗೆ ತಲೆ ನೋವಾಗಿದೆ ಎಂದು ತಿಳಿದು ಬಂದಿದೆ.

ಮಾಜಿ ಸಿಎಂಗಳ ಕಾಲಾವಧಿಯಲ್ಲಿ ಕಾರ್ಯನಿರ್ವಹಿಸಿರುವ ಸಿಬ್ಬಂದಿ ವಿಪಕ್ಷ ನಾಯಕರಿಗೆ ರಹಸ್ಯ ಮಾಹಿತಿದಾರರಾಗಿ ಕೆಲಸ ಮಾಡಿದ್ರೆ ಹೇಗೆ ಎಂಬ ಅನುಮಾನ ಯಡಿಯೂರಪ್ಪರನ್ನ ಕಾಡುತ್ತಿದೆ. ಇತ್ತ ಅನುಮಾನ ಬಂದ ಅಧಿಕಾರಿಗಳನ್ನು ಸಿಎಂ ವರ್ಗಾವಣೆ ಮೂಲಕ ಕೊಕ್ ಕೊಡುತ್ತಿದ್ದಾರೆ. ಸದ್ಯ ನೇಮಕಗೊಂಡಿರುವ ಸಿಬ್ಬಂದಿಯ ಮೇಲೆಯೂ ಸಿಎಂ ರಹಸ್ಯ ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *