Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು

Districts

ರಸ್ತೆ ಕಾಮಗಾರಿ ಹಣ ನುಂಗಲು ಗ್ರಾಮವನ್ನೇ ಸೃಷ್ಟಿಸಿದ ಅಧಿಕಾರಿಗಳು

Public TV
Last updated: December 31, 2019 10:45 am
Public TV
Share
2 Min Read
rcr golmaal 1
SHARE

ರಾಯಚೂರು: ರಸ್ತೆಗಳೇ ಇಲ್ಲದ ಗ್ರಾಮಗಳನ್ನ ನೀವು ನೋಡಿರಬಹುದು. ಆದರೆ ಗ್ರಾಮವೇ ಇಲ್ಲದ ಜಾಗಕ್ಕೆ ರಸ್ತೆ ನಿರ್ಮಿಸಿರುವುದನ್ನ ನೋಡಿರಲಿಕ್ಕಿಲ್ಲ. ಆದರೆ ರಾಯಚೂರಿನಲ್ಲಿ ಅಧಿಕಾರಿಗಳು ಇಂತಹ ಎಡವಟ್ಟು ಕೆಲಸವನ್ನ ಮಾಡಿದ್ದಾರೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿ ಕೋಟ್ಯಂತರ ರೂಪಾಯಿ ಸರ್ಕಾರಿ ಅನುದಾನವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.

ತಾಲೂಕಿನ ಪೂರತಿಪ್ಲಿ ಗ್ರಾಮದಿಂದ 2.3 ಕಿಲೋ ಮೀಟರ್‍ವರೆಗೆ ರಸ್ತೆ ಕಾಮಗಾರಿಯನ್ನೇನೋ ಮಾಡಲಾಗಿದೆ. ಆದರೆ ಅಲ್ಲಿ ಯಾವ ಕ್ಯಾಂಪ್ ಕೂಡ ಇಲ್ಲ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ದಿ ಸಂಸ್ಥೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ 1 ಕೋಟಿ 61 ಲಕ್ಷ ಅನುದಾನದಲ್ಲಿ ಪೂರತಿಪ್ಲಿಯಿಂದ ಪೂರತಿಪ್ಲಿ ಕ್ಯಾಂಪ್‍ವರೆಗೆ 2.3 ಕೀ.ಮೀ ರಸ್ತೆ ನಿರ್ಮಿಸಿರುವುದಾಗಿ ಹೇಳಿಕೊಂಡಿವೆ. ಆದರೆ ರಾಯಚೂರು ತಹಶೀಲ್ದಾರ್ ಕಂದಾಯ ಇಲಾಖೆ ದಾಖಲೆಗಳಲ್ಲಿ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವೇಯಿಲ್ಲ ಅಂತ ವರದಿ ನೀಡಿದ್ದಾರೆ.

rcr golmaal 2

ಹಾಗಾದರೆ ರಸ್ತೆ ನಿರ್ಮಾಣದ ಹಿಂದಿನ ಉದ್ದೇಶವೇನು ಅನ್ನೊದು ಗ್ರಾಮಸ್ಥರ ಪ್ರಶ್ನೆಯಾಗಿದೆ. ರಸ್ತೆಯೂ ಕಳಪೆಯಾಗಿರುವುದರಿಂದ ಗುತ್ತೆದಾರನ ಜೊತೆ ಅಧಿಕಾರಿಗಳು ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಇದರಲ್ಲಿ ಶಾಮೀಲಾಗಿದ್ದಾರೆ ಅಂತ ಗ್ರಾಮಸ್ಥರು ಹಾಗೂ ಹೋರಾಟಗಾರರು ಆರೋಪಿಸಿದ್ದಾರೆ.

ಪೂರತಿಪ್ಲಿ ಕ್ಯಾಂಪ್ 2.8 ಕಿ.ಮೀ ಅನ್ನೊ ಮೈಲುಗಲ್ಲು, ಪೂರತಿಪ್ಲಿ ರಾಯಚೂರು ಪೂರತಿಪ್ಲಿ ಕ್ಯಾಂಪ್ ಅಂತ ಬರೆದಿರುವ ಮಾರ್ಗಸೂಚಿ ಫಲಕ, ರಸ್ತೆ ಕಾಮಗಾರಿಯ ಬೋರ್ಡ್ ಗಳು ಅಲ್ಲಲ್ಲಿ ಹಾಕಲಾಗಿದೆ. ಇವುಗಳನ್ನ ನೋಡಿದರೆ ಯಾರಿಗಾದರೂ ಇಲ್ಲೆಲ್ಲೋ ಪೂರತಿಪ್ಲಿ ಕ್ಯಾಂಪ್ ಹೆಸರಿನ ಗ್ರಾಮವಿದೆ ಎಂದು ಅನಿಸುತ್ತೆ. ಆದರೆ ಜಮೀನುಗಳಿಗೆ ಹೋಗಲು ಇದ್ದ ಪುಟ್ಟ ರಸ್ತೆಯನ್ನೇ ನಿವೇಶನಗಳು ಇಲ್ಲದ, ಜನವಸತಿಯಿಲ್ಲದ, ದಾಖಲೆಯಲ್ಲೂ ಇಲ್ಲದ ಪೂರತಿಪ್ಲಿ ಕ್ಯಾಂಪ್‍ವರೆಗೆ ರಸ್ತೆ ನಿರ್ಮಿಸಲಾಗಿದೆ. ದಾರಿಯಲ್ಲಿನ ಬಸವಣ್ಣನ ದೇವಾಲಯದವರೆಗೆ ರಸ್ತೆಯನ್ನ ಮಾಡಲಾಗಿದೆ. ಕೇವಲ ಮೂರು ತಿಂಗಳು ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ಮುಗಿಸಿ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ.

rcr golmaal

ಕಾಮಗಾರಿ ಬಗ್ಗೆ ನೀಡಿದ ದೂರನ್ನ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ರಸ್ತೆಯಿಂದ ಜಮೀನಿಗೆ ಹೋಗುವ ರೈತರಿಗೆ ಅನುಕೂಲವಾಗಿದೆ ಅಂತ ವರದಿ ನೀಡಿ ಅಕ್ರಮವನ್ನ ಮುಚ್ಚಿಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಬಸನಗೌಡ ದದ್ದಲ ಅನುದಾನ ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಈ ಕಾಮಗಾರಿ ಮಾಡಿಸಿದ್ದಾರೆ ಎಂದು ರೈತ ಕೂಲಿ ಸಂಗ್ರಾಮ ಸಮಿತಿ ರಾಜ್ಯಾಧ್ಯಕ್ಷ ಬಸವರಾಜ್ ಗಾರಲದಿನ್ನಿ ಆರೋಪಿಸಿದ್ದಾರೆ.

rcr golmaal 3

ಜಿಲ್ಲೆಯಲ್ಲಿ ರಸ್ತೆಗಳೇ ಇಲ್ಲದ ಗ್ರಾಮಗಳು ಸಾಕಷ್ಟಿದ್ದರೂ ಗ್ರಾಮವೇ ಇಲ್ಲದ ಪ್ರದೇಶಕ್ಕೆ ರಸ್ತೆ ನಿರ್ಮಿಸಿರುವುದು ವಿಚಿತ್ರವಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕಿದೆ.

TAGGED:Illegal workMLAofficerPublic TVraichuruRoad Worksvillageಅಕ್ರಮಅಧಿಕಾರಿಗ್ರಾಮಪಬ್ಲಿಕ್ ಟಿವಿರಸ್ತೆ ಕಾಮಗಾರಿರಾಯಚೂರುಶಾಸಕ
Share This Article
Facebook Whatsapp Whatsapp Telegram

Cinema news

rashmika vijay dkshivakumar 1
ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್
Cinema Latest Top Stories
honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories

You Might Also Like

DK Shivakumar 9
Bengaluru City

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ: ಡಿಕೆಶಿ

Public TV
By Public TV
51 minutes ago
pete hegseth
Latest

ಮುಂದಿನ 24-48 ಗಂಟೆಗಳಲ್ಲಿ ಇರಾನ್ ಮೇಲಿನ ದಾಳಿ ಅತ್ಯಂತ ಭೀಕರವಾಗಿರಲಿದೆ – US ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ 

Public TV
By Public TV
1 hour ago
trump maga
Latest

ಇರಾನ್‌ ವಿರುದ್ಧ ಕಾರ್ಯಾಚರಣೆಗೆ ವಾಯುನೆಲೆ ಕೊಡಲ್ಲ ಎಂದ ಸ್ಪೇನ್‌ ಜೊತೆ ವ್ಯಾಪಾರ ಒಪ್ಪಂದ ರದ್ದುಗೊಳಿಸಿದ ಟ್ರಂಪ್‌

Public TV
By Public TV
2 hours ago
Bhatkal people petrol bunk
Latest

ಇಸ್ರೇಲ್‌-ಇರಾನ್‌ ಯದ್ಧ; ಭಟ್ಕಳದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ಜನ

Public TV
By Public TV
2 hours ago
basava kalyana police station protest
Bidar

ಮೌಲ್ವಿಗಳನ್ನ ಚುಡಾಯಿಸಿದ್ದಕ್ಕೆ ಕೆರಳಿ ಪ್ರೊಟೆಸ್ಟ್ – ಪೊಲೀಸ್ ಠಾಣೆ ಎದುರು ಭಾರಿ ಹೈಡ್ರಾಮಾ

Public TV
By Public TV
3 hours ago
Pakistan and Saudi Arabia agreement
Latest

ಇರಾನ್-ಇಸ್ರೇಲ್ ಯುದ್ಧಕ್ಕೆ ಪಾಕಿಸ್ತಾನ ಎಂಟ್ರಿ ಕೊಡುತ್ತಾ?

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?