ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

Public TV
1 Min Read
farmer buffalo

ಭೋಪಾಲ್: ಅಧಿಕಾರಿ ಕೇಳಿದಷ್ಟು ಲಂಚ ನೀಡಲು ಹಣವಿಲ್ಲದೇ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಬಳಿ ಇದ್ದ ಎಮ್ಮೆಯನ್ನೇ ಆದಾಯ ಇಲಾಖೆ ಅಧಿಕಾರಿ ವಾಹನಕ್ಕೆ ಕಟ್ಟಿ ಕೆಲಸ ಮಾಡಿಕೊಡುವಂತೆ ವಿಚಿತ್ರವಾಗಿ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾರೆ.

ಟಿಕಮ್‍ಗಢ ಜಿಲ್ಲೆಯ ಖರ್ಗಾಪುರ ಪ್ರದೇಶದಲ್ಲಿರುವ ಆದಾಯ ಇಲಾಖೆ ಕಚೇರಿ ಬಳಿ ಈ ಘಟನೆ ನಡೆದಿದೆ. ದೇವಪುರ ಗ್ರಾಮದ ನಿವಾಸಿಯಾದ ಲಕ್ಷ್ಮೀ ಯಾದವ್(50) ಲಂಚದ ಬದಲಾಗಿ ಎಮ್ಮೆಯನ್ನೇ ತಹಶೀಲ್ದಾರ್ ಅವರ ವಾಹನಕ್ಕೆ ಕಟ್ಟಿದ್ದಾರೆ.

farmer buffalo 2

ರೈತ ತಾನು ಖರೀದಿಸಿದ್ದ ಸ್ವಲ್ಪ ಜಮೀನನ್ನು ತನ್ನ ಸೊಸೆಯರ ಹೆಸರಿಗೆ ಮಾಡಿಸಲು ಆದಾಯ ಇಲಾಖೆ ಕಚೇರಿಗೆ ಹೋಗಿದ್ದರು. ಆಗ ಜಮೀನು ವರ್ಗಾವಣೆ ಮಾಡಿಕೊಡಲು ತಹಶೀಲ್ದಾರ್ 1ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರಿಂದ ಹೇಗೋ ಕಷ್ಟ ಪಟ್ಟು 50 ಸಾವಿರ ರೂಪಾಯಿಯನ್ನು ರೈತ ನೀಡಿದ್ದರು. ಆದರೆ ಪೂರ್ತಿ ಹಣವನ್ನು ನೀಡುವ ವರೆಗೂ ಕೆಲಸ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಪಟ್ಟುಹಿಡಿದಿದ್ದಾರೆ.

ಬಾಕಿ ಹಣವನ್ನು ಹೊಂದಿಸಲು ಆಗದೇ ಶನಿವಾರದಂದು ರೈತ ತನ್ನ ಬಳಿ ಇದ್ದ ಒಂದು ಎಮ್ಮೆಯನ್ನು ತಹಶೀಲ್ದಾರ್ ಅವರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ನನ್ನ ಬಳಿ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಈ ಎಮ್ಮೆಯನ್ನು ಇಟ್ಟುಕೊಂಡು ಜಮೀನು ವರ್ಗಾವಣೆ ಮಾಡಿಕೊಡಿ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

ಈ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸೌರವ್ ಕುಮಾರ ಸುಮನ್ ಅವರು ಈ ವಿಚಾರದ ಬಗ್ಗೆ ಎಲ್ಲಾ ಮಹಿತಿ ಪಡೆದು, ಸಮಸ್ಯೆಯನ್ನು ಬಗೆಹರಿಸುವಂತೆ ಬಾಲದೇವಗಡದ ಉಪವಿಭಾಗ ಅಧಿಕಾರಿಗೆ ಸೂಚಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *