ಚಿಕ್ಕಮಗಳೂರು: ಒಡಿಶಾ ರೈಲು ದುರಂತದಿಂದ (Odisha Train Accident) ಸಂಕಷ್ಟಕ್ಕೆ ಸಿಲುಕಿದ್ದ 110 ಜನ ಕನ್ನಡಿಗರು ಸುರಕ್ಷಿತವಾಗಿ ಜಾರ್ಖಂಡ್ನ (Jharkhand) ಸುಮೇದ್ ಸಿಖರ್ಜಿಗೆ ತಲುಪಿದ್ದಾರೆ. ಅಲ್ಲದೇ ತಾವು ಸೇಫ್ ಆಗಿದ್ದೇವೆ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಹೌರಾ ರೈಲಿನಲ್ಲಿ ಚಿಕ್ಕಮಗಳೂರಿನ (Chikkamagaluru) ಕಳಸ, ಸಂಸೆ, ಹೊರನಾಡು, ಕುದುರೆಮುಖದ ಸುಮಾರು 110 ಜನರು ಜೈನ ಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರು. ಈ ವೇಳೆ ರೈಲು ಅಪಘಾತಗೊಂಡಿತ್ತು. ಈಗ ಎಲ್ಲಾ ಯಾತ್ರಿಕರು ಕೋಲ್ಕತ್ತಾ (Kolkata) ರೈಲು ನಿಲ್ದಾಣದಿಂದ ಮೂರು ಬಸ್ಗಳ ಮೂಲಕ ಯಾತ್ರಾ ಸ್ಥಳಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ಬಂದಿದೆ. ಇದನ್ನೂ ಓದಿ: ದುರಂತಕ್ಕೂ ಮುಂಚೆ ಮಾಡಿದ್ದು ಎನ್ನಲಾದ ವೀಡಿಯೋ ವೈರಲ್ – ರೈಲು ಬೋಗಿಗಳಲ್ಲಿ ಕಿಕ್ಕಿರಿದು ತುಂಬಿದ್ರು ಪ್ರಯಾಣಿಕರು
ಈಗಾಗಲೇ ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಯಾತ್ರಿಕರು, ತಾವು ಸೇಫ್ ಆಗಿದ್ದೇವೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಅಪಘಾತದಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದಿಂದ ಪಾರಾಗಿ ಬಂದಿದ್ದವರು ಹೊರಟಿದ್ದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ