ಮೈಸೂರು: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಫ್ಲೆಕ್ಸ್ಗಳು ಮೈಸೂರಿನಲ್ಲಿ ರಾರಾಜಿಸಿದೆ.
ಮೈಸೂರಿನ ರಾಜೇಂದ್ರ ನಗರದ 101 ಗಣಪತಿ ದೇವಸ್ಥಾನದಿಂದ ಮೆರವಣಿಗೆ ಸಂದರ್ಭದಲ್ಲಿ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದ ಬಿಜೆಪಿಯ ಮಾಜಿ ಕಾರ್ಯಕರ್ತೆ ನೂಪುರ್ ಶರ್ಮಾ ಫ್ಲೆಕ್ಸ್ ಹಾಕಿರುವುದು ಕಂಡು ಬಂತು. ಈ ನೂಪುರ್ ಶರ್ಮಾ ಅವರ ಫೋಟೋವನ್ನು ರಾಷ್ಟ್ರ ನಾಯಕರ ಫ್ಲೆಕ್ಸ್ ಜೊತೆ ಹಾಕಿ ಮೆರವಣಿಗೆ ಮಾಡಲಾಯಿತು. ಇದನ್ನೂ ಓದಿ: ಕಾರವಾರ: ವರ್ಷಕ್ಕೊಮ್ಮೆ ದರ್ಶನ ನೀಡುವ ಸಾತೇರಿ ದೇವರ ಜಾತ್ರೆ ಆರಂಭ
ಮೆರವಣಿಗೆ ವೇಳೆ ಪ್ರಧಾನಿ ಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಬಿಜೆಪಿ ನಾಯಕಿ ನೂಪುರ್ ಶರ್ಮಾ, ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ, ಕನಕದಾಸ ಸೇರಿದಂತೆ ಹಲವರ ಫ್ಲೆಕ್ಸ್ ಹಾಕಲಾಗಿತ್ತು. ಆರ್ಎಸ್ಎಸ್ ಹಾಗೂ ಬಿಜೆಪಿ ನಾಯಕರು ಈ ಫ್ಲೆಕ್ಸ್ನ್ನು ಹಾಕಿದ್ದರು. ಮೆರವಣಿಗೆ ವೇಳೆ ಹತ್ಯೆಯಾದ ಹಿಂದೂ ಕಾರ್ಯಕರ್ತರಾದ ಕ್ಯಾತಮಾರನಹಳ್ಳಿ ರಾಜು, ಶಿವಮೊಗ್ಗದ ಹರ್ಷ ಭಾವಚಿತ್ರಗಳ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಇದನ್ನೂ ಓದಿ: ಗೌರಿ ಕೂರಿಸುವ ವಿಚಾರವಾಗಿ ಗಲಾಟೆ – ತಂಗಿ ಗೌರಿ ತಂದಿದ್ದಕ್ಕೆ ಮನನೊಂದು ಅಕ್ಕ ಆತ್ಮಹತ್ಯೆ