ಕೋಲಾರ: ಕಾರ್ಯಕರ್ತನೊಬ್ಬ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M Ibrahim) ಅವರ ದೃಷ್ಠಿ ತೆಗೆದು ನೋಟಿನ ಸುರಿಮಳೆಗೈದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಮುಳಬಾಗಿಲಿನಲ್ಲಿ (Mulabagilu) ಸೋಮವಾರ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಿತ್ತು. ಸಮಾವೇಶಕ್ಕೂ ಮುನ್ನ ರೋಡ್ ಶೋ (Roadshow) ವೇಳೆ ಕಾರ್ಯಕರ್ತ ವಾಹನದ ಮೇಲೇರಿ ಇಬ್ರಾಹಿಂ ಹಾಗೂ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಅವರ ದೃಷ್ಠಿ ತೆಗೆದು ನೋಟನ್ನು ಗಾಳಿಗೆ ತೂರಿದ್ದಾನೆ. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ
10, 20, 50 ಮುಖ ಬೆಲೆಯ ಎರಡು ಕಂತೆಗಳನ್ನ ನಾಯಕರಿಗೆ ದೃಷ್ಠಿ ತೆಗೆದು ಎಸೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ನೋಟಿಗಾಗಿ ಅಲ್ಲಿದ್ದ ಜನ ಮುಗಿಬಿದ್ದ ಸನ್ನಿವೇಶ ಕೂಡ ನಡೆದಿದೆ. ಇದನ್ನೂ ಓದಿ: ಕುಡಿದು ಗಲಾಟೆ ಮಾಡುತ್ತಿದ್ದವನ ಪ್ರಶ್ನೆ ಮಾಡಿದ ಸಂಬಂಧಿಯನ್ನೇ ಕೊಂದ- ಮತ್ತೋರ್ವನಿಗೆ ಗಾಯ