ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ (Northwest Karnataka Road) ಸಾರಿಗೆ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳ ಲಂಚಾವತಾರದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಬಿತ್ತರವಾದ 24 ಗಂಟೆಯೊಳಗೆ ಅಧಿಕಾರಗಳ ವಿರುದ್ಧ ಕ್ರಮವಾಗಿದ್ದು, ನೊಂದ ಅಭ್ಯರ್ಥಿಗಳು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಸಾರಿಗೆ ಇಲಾಖೆ ಲಂಚ ಪಡೆದ ತರಬೇತಿದಾರಾದ ಆರ್.ಸಿ ನರೇಗಲ್ಲ ಮಠ ಮತ್ತು ಸಿಎಂ ಹುಲಸೋಗಿ ಅಮಾನತು ಮಾಡಿದೆ. ಸಿಬ್ಬಂದಿ ಅಮಾನತು ಮಾಡಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಶಿಸ್ತುಪಾಲನಾಧಿಕಾರಿ ಆದೇಶ ಹೊರಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

